ವಿಕಸಿತ ಭಾರತಕ್ಕಾಗಿ ಶಿಕ್ಷಕರ ಪಾತ್ರ

ವಿದ್ಯಾಭಾರತಿಯ ಉಚ್ಛ ಶಿಕ್ಷಾ ಸಂಸ್ಥಾನ್ ಮತ್ತು ಪೂರ್ಣಪ್ರಜ್ಞ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ  ಕಾಲೇಜಿನ ಎ.ವಿ ಹಾಲ್‌ನಲ್ಲಿ ವಿಕಸಿತ ಭಾರತಕ್ಕಾಗಿ ಶಿಕ್ಷಕರ ಪಾತ್ರದ ಕುರಿತು ಅಧ್ಯಾಪಕರ ಜೊತೆ ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ವಕ್ತಾರರಾಗಿ ಸಂವೇದನಾ ಪೌಂಡೇಶನ್‌ನ ಸಂಚಾಲಕರಾದ ಶ್ರೀ ಪ್ರಕಾಶ್ ಮಲ್ಪೆ ಅವರು ಮಾತನಾಡುತ್ತಾ ರಾಷ್ಟ್ರ ಒಂದರ ಸಾಂಸ್ಕೃತಿಕ ವಿಕಾಸಕ್ಕೆ ಜಗತ್ತಿನ ಮೊದಲ ಉದಾಹರಣೆ ಭಾರತ. ಆರಂಭದಲ್ಲಿ ಆಕ್ರಮಣಕಾರಿಗಳಾಗಿ ಬಂದು, ನಂತರ ಆಶ್ರಯ ಕೋರಿ ಬಂದ ಪರ್ಷಿಯನ್ನರೇ ಮೊದಲಾದವರಿಗೆ ಆಶ್ರಯ ಕೊಟ್ಟು ಸಾಮಾಜಿಕ ವಿಕಾಸದ ಎತ್ತರವನ್ನೂ ಭಾರತ ಅಂದೇ ತೋರಿಸಿತ್ತು.

ಭಾರತವು ಮೊದಲಿನಿಂದಲೂ ಆರ್ಥಿಕವಾಗಿ ಸ್ಕೃತಿಕವಾಗಿ ಸಂಪದ್ಭರಿವಾಗಿದೆ. ಇದನ್ನೆಲ್ಲವನ್ನು ಅರಿತು ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ.. ಇಡೀ ವಿದ್ಯಾರ್ಥಿ ಸಮುದಾಯವನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವ ಹೊಣೆ ಶಿಕ್ಷಕರದಾಗಿರುತ್ತದೆ ಈ ಕಾರ್ಯ ನಡೆದಾಗ ವಿಕಸಿತ ಭಾರತ ಆಗುವುದರಲ್ಲಿ ಯಾವುದೇ ಸಂದೇಹವಿರುವುದಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐ.ಕ್ಯೂ.ಎ.ಸಿ ಯ ಸಂಯೋಜಕರಾದ ಡಾ. ವಿನಯ್ ಅವರು ವಹಿಸಿದ್ದರು. ಕರ್ನಾಟಕ ದಕ್ಷಿಣ ಪ್ರಾಂತದ ಉಚ್ಛಶಿಕ್ಷಾ ಸಂಸ್ಥಾನದ ಸಂಯೋಜಕರಾದ ಡಾ. ಶಿವಾನಂದ ನಾಯಕ್ ಅವರು ಸ್ವಾಗತಿಸಿದರು.

ಪೂರ್ಣಪ್ರಜ್ಞಾ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕೆ. ಸಂತೋಷ್ ಕುಮಾರ್ ಅವರು ವಂದಿಸಿದರು. ರಾಜಶಂಕರ್ ಅವರು ಕಾರ್ಯಕ್ರಮ ನಿರೂಪಿಸಿರು.

 
 
 
 
 
 
 
 
 
 
 

Leave a Reply