ಈ ಸಂದರ್ಭದಲ್ಲಿ ಭುವನ ಪ್ರಸಾದ್ ಹೆಗಡೆ ಮಣಿಪಾಲ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸುಹಾಸಂ ಕಾರ್ಯದರ್ಶಿ ಎಚ್ ಗೋಪಾಲ ಭಟ್, ಉಪಸ್ಥಿತರಿದ್ದರು. ಲೇಖಕ ದಂಪತಿಗಳನ್ನು ಹಾಗು ಶಾಸಕ ಗುರ್ಮೆ ಸುರೇಶ ಶೆಟ್ಟಿಯವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ ಅಭಿನಂದಿಸಿ ಗೌರವಿಸಿದರು.
ಡಾ। ಸಂಧ್ಯಾ ಅಡಿಗ ಕುಂದಾಪುರ ಪ್ರಾರ್ಥಿಸಿದರು. ಎಚ್ ಶಾಂತರಾಜ್ ಐತಾಳ್ ಸ್ವಾಗತಿಸಿದರು. ಕೃತಿ ಪರಿಚಯವನ್ನು ವಿದ್ಯಾ ಪ್ರಸಾದ್ ಉಡುಪಿ ಮಾಡಿದರು. ಡಾ। ಸಪ್ಪಾ ಜೆ ಉಕ್ಕಿನಡ್ಕ ವಂದಿಸಿದರು. ಸುಹಾಸಂ ಶ್ರೀನಿವಾಸ ಉಪಾಧ್ಯ ನಿರೂಪಿಸಿದರು.
ಜನವರಿ 30ರಂದು ನಡೆಯುವ ಕಸಾಪ ಉಡುಪಿ ತಾಲೂಕು ಘಟಕದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶಾಂತರಾಜ ಐತಾಳ್ ರವರನ್ನು ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ., ಕಾರ್ಯದರ್ಶಿ ಜನಾರ್ದನ್ ಕೊಡವೂರು, ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಮೊದಲಾದವರು ಗೌರವಿಸಿ, ಅಭಿನಂದಿಸಿದರು.