ಲೇಖಕ ಎಚ್ ಶಾಂತರಾಜ ಐತಾಳರ ಎರಡು ಕೃತಿಗಳ ಬಿಡುಗಡೆ 

ಸುಹಾಸಂ ಉಡುಪಿ ಮತ್ತು ಕಲ್ಕೂರ ಪ್ರತಿಷ್ಠಾನ (ರಿ.), ಮಂಗಳೂರು​ ವತಿಯಿಂದ ​ಲೇಖಕ ಎಚ್ ಶಾಂತರಾಜ ಐತಾಳರ​ ಬಿಸಿಲುದುರೆಯ ಬೆನ್ನೇರಿದವ (ಆತ್ಮಕಥನ)​ ಮತ್ತು ಬಾಲಂಗೋಚಿ (ಮಂದಹಾಸ ಮೂಡಿಸುವ ಮಾತ್ರೆಗಳು)​ ಎರಡು ಕೃತಿಗ​ಳನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಕಿದಿಯೂರು ಹೊಟೇಲ್​ ನ  ರೂಫ್ ಟಾಪ್​ ನಲ್ಲಿ ಶನಿವಾರದಂದು ಬಿಡುಗಡೆಗೊಳಿಸಿದರು.   
ಈ ಸಂದರ್ಭದಲ್ಲಿ  ಭುವನ ಪ್ರಸಾದ್ ಹೆಗಡೆ ಮಣಿಪಾಲ​, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ​, ಸುಹಾಸಂ ಕಾರ್ಯದರ್ಶಿ ಎಚ್ ಗೋಪಾಲ ಭಟ್​,  ​ಉಪಸ್ಥಿತರಿದ್ದರು.  ​ಲೇಖಕ ದಂಪತಿಗಳನ್ನು ಹಾಗು ಶಾಸಕ ಗುರ್ಮೆ ಸುರೇಶ ಶೆಟ್ಟಿಯವರನ್ನು ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ್ ಕಲ್ಕೂರ​ ಅಭಿನಂದಿಸಿ ಗೌರವಿಸಿದರು. 
 ಡಾ​। ಸಂಧ್ಯಾ ಅಡಿಗ ಕುಂದಾಪುರ​ ಪ್ರಾರ್ಥಿಸಿದರು.  ಎಚ್ ಶಾಂತರಾಜ್ ಐತಾಳ್​ ಸ್ವಾಗತಿಸಿದರು. ಕೃತಿ ಪರಿಚಯ​ವನ್ನು ವಿದ್ಯಾ ಪ್ರಸಾದ್ ಉಡುಪಿ​ ಮಾಡಿದರು. ಡಾ​। ಸಪ್ಪಾ ಜೆ ಉಕ್ಕಿನಡ್ಕ​ ವಂದಿಸಿದರು. ಸುಹಾಸಂ ಶ್ರೀನಿವಾಸ ಉಪಾಧ್ಯ​ ನಿರೂಪಿಸಿದರು.
​ಜನವರಿ 30ರಂದು ನಡೆಯುವ ಕಸಾಪ ಉಡುಪಿ ತಾಲೂಕು ಘಟಕದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಶಾಂತರಾಜ ಐತಾಳ್ ರವರನ್ನು ತಾಲೂಕು ಅಧ್ಯಕ್ಷ  ​ರವಿರಾಜ್ ಹೆಚ್ ಪಿ., ಕಾರ್ಯದರ್ಶಿ ಜನಾರ್ದನ್  ಕೊಡವೂರು, ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಹಂದಾಡಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ  ಸ್ಥಾಪಕಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ ಮೊದಲಾದವರು ಗೌರವಿಸಿ, ಅಭಿನಂದಿಸಿದರು.

 
 
 
 
 
 
 
 
 
 
 

Leave a Reply