ಯೋಗಾಸನ: ವೈಶಾಲಿ ಜಿಲ್ಲೆಗೆ ದ್ವಿತೀಯ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಛೇರಿ ಉಡುಪಿ.(ಪ್ರೌಢಶಾಲಾ ವಿಭಾಗ) ಹಾಗೂ ಸ.ಪ.ಪೂ.ಕಾಲೇಜು ಮಲ್ಪೆ,ಉಡುಪಿ ಇವರ ಜಂಟಿ ಆಶ್ರಯದಲ್ಲಿ ನಡೆದ 2023-24ನೇ ಸಾಲಿನ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಂಬದಕೋಣೆ ಇಲ್ಲಿನ ಏಳನೇ ತರಗತಿ ವಿದ್ಯಾರ್ಥಿನಿ ಕುಮಾರಿ ವೈಶಾಲಿ ದ್ವಿತೀಯ ಬಹುಮಾನ ಪಡೆದಿರುತ್ತಾಳೆ.

ಈ ಸಂದರ್ಭದಲ್ಲಿ ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗಿದ ಭಜನ್’ಸಂಕೀರ್ತನೆ ಕಾರ್ಯಕ್ರಮದಲ್ಲಿ ವೆಂಕಟರಮಣ ಸೇವಾ ಸಮಿತಿ ಟ್ರಸ್ಟ್ ಮತ್ತು ಶ್ರೀ ಸೇವಾ ಪ್ರತಿಷ್ಠಾನ ನಾಯ್ಕನಕಟ್ಟೆ ವತಿಯಿಂದ ಹಿರಿಯರಾದ ಶ್ರೀ ಗೋವಿಂದ್ರಾಯ ಪೈ ನಾಗೂರು ಇವರು ಶಾಲು ಸನ್ಮಾನದೊಂದಿಗೆ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಿದರು.
ಸೇವಾ ಪ್ರತಿಷ್ಠಾನದ ಶ್ರೀಶ ಭಟ್, ಟ್ರಸ್ಟ್ ಅಧ್ಯಕ್ಷ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ ಪೈ, ಅರ್ಚಕರಾದ ಬಾಲಕೃಷ್ಣ ಭಟ್,ಭಜನೆ ಸೇವಾದಾರರಾದ ಗೋಪಾಲ ಪ್ರಭು ಸಮಿತಿಯ ಸದಸ್ಯರು ಮತ್ತು ಪೋಷಕರಾದ ಶ್ರೀಮತಿ ಜಯಾ ಮತ್ತು ನಾಮದೇವ ಶ್ಯಾನುಭಾಗ್ ಉಪಸ್ಥಿತರಿದ್ದರು. ಈಕೆ ನಾಯ್ಕನಕಟ್ಟೆ ಗಣಪಯ್ಯ ಶ್ಯಾನುಭಾಗ್ ಮತ್ತು ಸುಶೀಲಾ‌ ದಂಪತಿಗಳ ಮೊಮ್ಮಗಳು.

 
 
 
 
 
 
 
 
 
 
 

Leave a Reply