ಬಹುಮುಖ ಸಾಧನೆಗೆ ಸಂದ ಗೌರವ~ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

ಸಾಹಿತ್ಯ, ಫಿಲಾಟಲಿ ಹವ್ಯಾಸ, ಅಡುಗೆ ವೈವಿಧ್ಯ, ಕಾರ್ಯಕ್ರಮ ನಿರೂಪಣೆ, ಸಂಯೋಜನೆ, ನಿಯತಕಾಲಿಕಗಳಿಗೆ ಲೇಖನ, ರೋಟರಿ ಯಂತಹ ಸಮಾಜ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಜನ ಮಾನಸದಲ್ಲಿ ಮನೆಮಾತಾಗಿರುವ ಪೂರ್ಣಿಮಾ ಜನಾರ್ದನ್ ರವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸ್ತುತ್ಯರ್ಹ.

ಅರ್ಹ ವ್ಯಕ್ತಿಗಳಿಗೆ ಜಿಲ್ಲಾಡಳಿತ ಪ್ರಶಸ್ತಿ  ಪ್ರದಾನ ಮಾಡಿದೆ ಎಂದು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಹೇಳಿದರು. ಅವರು ಈ ಬಾರಿಯ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದ ಪೂರ್ಣಿಮಾ ಜನಾರ್ದನ್ ರವರ ಮನೆಗೆ ತೆರಳಿ ಅವರಿಗೆ ಶಾಲು, ಸ್ಮರಣಿಕ ಫಲ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಗೌರವ ಸಲಹೆಗಾರ ಜನಾರ್ದನ್  ಕೊಡವೂರು ,ಉಪಾಧ್ಯಕ್ಷ ಈರಪ್ಪ ಗೌಂಡಿ, ಮಹಿಳಾ ಅಧ್ಯಕ್ಷೆ ಸವಿತಾ ನೋಟಗಾರ್, ಖಜಾಂಚಿ ಬಸವರಾಜ್ ಐಹೊಳೆ, ಕಾರ್ಯದರ್ಶಿ ಮಹೇಶ್ ಗುಂಡಿಬೈಲ್ ಹಾಗು ರಂಜಿತ್ ಕೊಡವೂರು ಉಪಸ್ಥಿತ ರಿದ್ದರು.

 
 
 
 
 
 
 
 
 
 
 

Leave a Reply