ಸಾಹಿತ್ಯ, ಫಿಲಾಟಲಿ ಹವ್ಯಾಸ, ಅಡುಗೆ ವೈವಿಧ್ಯ, ಕಾರ್ಯಕ್ರಮ ನಿರೂಪಣೆ, ಸಂಯೋಜನೆ, ನಿಯತಕಾಲಿಕಗಳಿಗೆ ಲೇಖನ, ರೋಟರಿ ಯಂತಹ ಸಮಾಜ ಸೇವಾ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಹಲವಾರು ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಜನ ಮಾನಸದಲ್ಲಿ ಮನೆಮಾತಾಗಿರುವ ಪೂರ್ಣಿಮಾ ಜನಾರ್ದನ್ ರವರಿಗೆ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಬಂದಿರುವುದು ಸ್ತುತ್ಯರ್ಹ.
ಅರ್ಹ ವ್ಯಕ್ತಿಗಳಿಗೆ ಜಿಲ್ಲಾಡಳಿತ ಪ್ರಶಸ್ತಿ ಪ್ರದಾನ ಮಾಡಿದೆ ಎಂದು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ಹೇಳಿದರು. ಅವರು ಈ ಬಾರಿಯ ರಾಜ್ಯೋತ್ಸವ ಪುರಸ್ಕಾರವನ್ನು ಪಡೆದ ಪೂರ್ಣಿಮಾ ಜನಾರ್ದನ್ ರವರ ಮನೆಗೆ ತೆರಳಿ ಅವರಿಗೆ ಶಾಲು, ಸ್ಮರಣಿಕ ಫಲ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೌರವ ಸಲಹೆಗಾರ ಜನಾರ್ದನ್ ಕೊಡವೂರು ,ಉಪಾಧ್ಯಕ್ಷ ಈರಪ್ಪ ಗೌಂಡಿ, ಮಹಿಳಾ ಅಧ್ಯಕ್ಷೆ ಸವಿತಾ ನೋಟಗಾರ್, ಖಜಾಂಚಿ ಬಸವರಾಜ್ ಐಹೊಳೆ, ಕಾರ್ಯದರ್ಶಿ ಮಹೇಶ್ ಗುಂಡಿಬೈಲ್ ಹಾಗು ರಂಜಿತ್ ಕೊಡವೂರು ಉಪಸ್ಥಿತ ರಿದ್ದರು.