ರಾಷ್ಟೀಯ ಹಾಗು ರಾಜ್ಯ ಮಟ್ಟದಲ್ಲಿ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಬಾಚಿಕೊಂಡ ಉಡುಪಿ ಅಂಚೆ ವಿಭಾಗ:

ಅಂಚೆ ಇಲಾಖೆಯ ಬಹು‌ಜನಜನಿತ ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ ಅತೀ ಹೆಚ್ಚಿನ ಪ್ರೀಮಿಯಮ್ ಸಂಗ್ರಹಿಸಿ ಬೈಂದೂರು ಉಪ ಅಂಚೆ ಕಚೇರಿಯ ಅಂಚೆ ಸಹಾಯಕರಾದ ಸುರೇಂದ್ರ ಡಿ‌ ಇವರು ರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಅಲ್ಲದೇ ಮಣಿಪಾಲ ಪ್ರಧಾನ ಅಂಚೆ ಕಚೇರಿಯ ಉಪ ಅಂಚೆ ಪಾಲಕರಾದ ಶಂಕರ ಪೆರ್ಣಂಕಿಲ‌ ಇವರು ಗ್ರಾಮೀಣ ಅಂಚೆ ಜೀವ ವಿಮಾ ವಿಭಾಗದಲ್ಲಿ ಕರ್ನಾಟಕ‌ ವೃತ್ತಕ್ಕೆ ಮೊದಲಿಗರಾಗಿ ಗುರಿತಿಸಿಕೊಂಡಿದ್ದಾರೆ.

ಗ್ರಾಮೀಣ ಅಂಚೆ ಜೀವವಿಮೆಯಲ್ಲಿ ಉಡುಪಿ ಅಂಚೆ ವಿಭಾಗವು ಮೊದಲ ಸ್ಥಾನವನ್ನು‌ ಪಡೆದಿದ್ದು ಕರ್ನಾಟಕ ವೃತ್ತದಲ್ಲಿ ನೀಡಿದ ಬೆಸ್ಟ್ ಡಿವಿಜನ್ ಪ್ರಶಸ್ತಿಯನ್ನು ಉಡುಪಿ ಅಂಚೆ ಅಧೀಕ್ಷಕರಾದ ನವೀನ್ ‌ಚಂದರ್ ರವರು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಶಾರದಾ ಸಂಪತ್ ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವಿಸ್ ಮಹೇಂದ್ರ ಗಜ್ ಭಾಯ್ , ಹಾಗೂ ಕರ್ನಾಟಕ ವೃತ್ತದ ಇಲಾಖಾ ಮೇಲಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply