ಡಾ ಕೆ ಜಿ ಭಟ್ಟರು ನಾಡಿನ ದೊಡ್ಡ ಆಸ್ತಿ : ಪೇಜಾವರ ಶ್ರೀ

ಜಿಲ್ಲಾರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ  ಸಸ್ಯಶಾಸ್ತ್ರ‌ವಿಜ್ಞಾನಿ ಡಾ ಕೆ ಜಿ ಭಟ್ಟರು ಜಿಲ್ಲೆ ಮಾತ್ರವಲ್ಲ ಇಡೀ ನಾಡಿನ ದೊಡ್ಡ ಆಸ್ತಿ. ಅವರ ಪರಿಶ್ರಮ ಸಾಧನೆಗಳು ಸಾಮಾನ್ಯರ ಅರಿವಿಗೆ ಬರಲ್ಲ. ತಡವಾಗಿಯಾದರೂ ಜಿಲ್ಲಾಡಳಿತ ಅವರನ್ನು ಗೌರವಿಸಿರುವುದಕ್ಕೆ ಅತೀವ ಸಂತಸವಾಗಿದೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ 
ಸೋಮವಾರ  ಡಾ ಭಟ್ಟರನ್ನು ಅಭಿನಂದಿಸುವ ಸಲುವಾಗಿಯೇ ದಿಢೀರಾಗಿ ಉಡುಪಿ ನಗರದ ಚಿಟ್ಪಾಡಿಯ ಶ್ರೀನಿವಾಸ ನಗರದ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀಗಳು ಡಾ ಭಟ್ಟ ದಂಪತಿಯನ್ನು  ಮನಸಾರೆ ಸಂಮಾನಿಸಿದರು. ಪ್ರೊ ವೇಣುಗೋಪಾಲ್ ಮುಳ್ಳೇರಿಯಾ ಪ್ರೊ ವಿ ಅರವಿಂದ ಹೆಬ್ಬಾರ್ , ಡಾ ಎನ್ ಎ ಮಧ್ಯಸ್ಥ , ಎಸ್ ವಿ ಭಟ್ ಮೊದಲಾದವರು ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply