ಉಡುಪಿ ಕಿನ್ನಿಮೂಲ್ಕಿ ಯೋಗ ಕ್ಷೇಮ ಸ್ಟುಡಿಯೋ ಅಮಿತ ಭಟ್ ನೇತೃತ್ವದಲ್ಲಿ ರಥ ಸಪ್ತಮಿಯ ಪ್ರಯುಕ್ತ ಹಮ್ಮಿಕೊಂಡಿದ್ದ ಸಾಮೂಹಿಕ 108 ಸೂರ್ಯ ನಮಸ್ಕಾರದಲ್ಲಿ 42 ಶಿಭಿರಾರ್ಥಿಗಳು ಇದರ ಪ್ರಯೋಜನ ಪಡೆದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮಣಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಆದಿತ್ಯ ಹೃದಯ ಹೋಮ ಸಂಪನ್ನಗೊಂಡಿತು. ಇಂದ್ರಿಯಗಳನ್ನು ಚೆನ್ನಾಗಿರಿಸುವ ಮುಖಾಂತರ ನಮ್ಮೊಳಗೆ ಸೂಪ್ತವಾಗಿರುವ ದೇವರ ಚಿಂತನೆ ಮಾಡಿ , ಶರೀರವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡರೆ ಹೊರ ಪ್ರಪಂಚದ ಸುಖವನ್ನು ಅನುಭವಿಸಬಹುದು. ಗ್ರಹಗಳ ಮದ್ಯೆ ಇರುವ ಗ್ರಹ ಸೂರ್ಯ, ನಾವು ಸೂರ್ಯನ ಶಕ್ತಿಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಸಾಧನೆ ಮಾಡಬಹುದು.
ಬೆಳಿಗ್ಗೆ 5.30 ಯಿಂದ 6.30 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಿತು.