ನಾದ ವೈಭವಂ ವಾಸುದೇವ ಭಟ್ ರವರಿಗೆ ಗೌರವ ಅಭಿನಂದನೆ

‘ಸಾಧಕರೊಂದಿಗೆ ನಾವು ‘  ಕಾರ್ಯಕ್ರಮದಡಿಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ವತಿಯಿಂದ ಉಡುಪಿಯ ಹಿರಿಯ ಸಂಗೀತ ಗುರು, ಪ್ರಾಧ್ಯಾಪಕ, ಪತ್ರಕರ್ತ, ನಿರ್ದೇಶಕ , ಉಡುಪಿ ನಾದ ವೈಭವಂ ವಾಸುದೇವ ಭಟ್ ಅವರನ್ನು ಇಂದ್ರಾಳಿಯಲ್ಲಿರುವ ಅವರ ಸ್ವಗೃಹದಲ್ಲಿ 10 ಸಾವಿರ ಗೌರವಧನ ದೊಂದಿಗೆ ಸ್ಮರಣಿಕೆ ನೀಡಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೆೈ ಅವರು ಗೌರವಿಸಿದರು.

 ಈ ಸಂದರ್ಭದಲ್ಲಿ ಪೂರ್ಣಿಮ ಜನಾರ್ಧನ್ ಸ್ವಾಗತಿಸಿ  ಪರಿಚಯಿಸಿದರು.  ಪ್ರತಿಷ್ಠಾನದ ಉಪಾಧ್ಯಕ್ಷೆ ಸಂಧ್ಯಾ ಶೆಣೈ,  ಪತ್ರಕರ್ತ ಶೇಖರ ಅಜೆಕಾರು ಅಭಿನಂದನಾ ಮಾತುಗಳನ್ನಾಡಿದರು .

ವಾಸುದೇವ ಭಟ್ ಅವರ ಪತ್ನಿ ಸುನಂದಾ, ಮಗಳು  ಶುಭಾ ಬಾಸ್ರಿ, ಸುದರ್ಶನ್ ದೇವಾಡಿಗ, ಪ್ರಶಾಂತ್ ಕಾಮತ್ , ಪತ್ರಕರ್ತ ನರಸಿಂಹಮೂರ್ತಿ, ಸಂಚಾಲಕ ರವಿರಾಜ್ ಎಚ್.ಪಿ ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply