ಕೋಟ ಶ್ರೀನಿವಾಸ ಪೂಜಾರಿ ಔಟ್.. ಸುನಿಲ್ ಕುಮಾರ್ ಇನ್..?

ಅಪ್ಪಟ ದೇಶ ಪ್ರೇಮಿಯಾಗಿ, ರಾಷ್ಟ್ರೀಯವಾದಿ ಚಿಂತನೆಯ ಒಲವು ಹೊಂದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಡೆಗೆ ಆಕರ್ಷಿತರಾಗಿ ಸಂಘದ ಗರಡಿಯಲ್ಲಿ ಶಿಸ್ತಿನ ಶಿಪಾಯಿಯಾಗಿ ತಮ್ಮ ವ್ಯಕ್ತಿತ್ವ ನಿರ್ಮಾಣ ನಿರ್ಮಾಣ ಮಾಡಿಕೊಂಡಿರುವ ಶಾಸಕ ಸುನಿಲ್ ಕುಮಾರ್ ರವರಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಬಾಲ್ಯದಿಂದಲೇ ವಾಕ್ಚಾತುರ್ಯವನ್ನು ಬೆಳೆಸಿಕೊಂಡು ವಿವಿಧ ರೀತಿಯ ಭಾಷಣ, ಚರ್ಚೆ, ಭಾವಗೀತೆ, ದೇಶಪ್ರೇಮದ ಗೀತೆಗಳಲ್ಲಿ ಮುಂಚೂಣಿಯ ಸಾಧನೆ.  ಹಿಂದುತ್ವದ ಸಿದ್ದಾಂತವನ್ನು ಮೈಗೂಡಿಸಿಕೊಂಡು ಬಜರಂಗದಳದ ಮೂಲಕ ಹಿಂದೂಪರ ಹೋರಾಟ , ಅದಕ್ಕೆ ಕೈಗನ್ನಡಿಯೋ ಎಂಬಂತೆ 1997ರಲ್ಲಿ ರಾಷ್ಟ್ರದ ಗಮನ ಸೆಳೆದ ದತ್ತಪೀಠದ ಹೋರಾಟವನ್ನು ಒಂದು ವೃತದಂತೆ ಕೈಗೊಂಡ ರೀತಿ ಲಕ್ಷಾಂತರ ಜನರ ಮೆಚ್ಚುಗೆಯನ್ನು ಗಳಿಸಿತ್ತು. 

ಸಹಸ್ರ ಸಹಸ್ರ ಹಿಂದುಗಳನ್ನು ಒಟ್ಟುಗೂಡಿಸಿದರಲ್ಲದೆ ಅವರನ್ನು ದತ್ತಮಾಲೆಯನ್ನು ಧರಿಸಿ ಒಂದು ದೀಕ್ಷೆಯನ್ನು ಪಡೆಯುವಂತೆ ಪ್ರೇರೇಪಿಸಿದ್ದರು. ಮುಂದೆ ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕರಾಗಿ, ಕರ್ನಾಟಕ ರಾಜ್ಯ ಸಂಚಾಲಕರಾಗಿ ಸಂಘಟನೆಯನ್ನು ಬಲಪಡಿಸಿದ್ದು ಈಗ ಇತಿಹಾಸ. ನಿರಂತರ ಹೋರಾಟ, ಕಠಿಣ ಪರಿಶ್ರಮ, ನ್ಯಾಯ ನಿಷ್ಠುರತೆ , ಜನಪರ ಕಾಳಜಿ, ದೇಶಪ್ರೇಮ, ಅಂದಿನ ಸರಕಾರಗಳ ಸುಳ್ಳು ಪ್ರಕರಣಗಳ ಯಾವುದೇ ಬೆದರಿಕೆಗಳಿಗೆ ಜಗ್ಗದೆ, ಎದೆಗುಂದದೆ ಧೈರ್ಯವಾಗಿ ಎದುರಿಸಿದ್ದರಿಂದಲೇ ಮುಂದೆ ಅವಕಾಶಗಳು ಅರಸುತ್ತಾ ಬಂದುವು.ಪರಿಣಾಮವಾಗಿ 2004ರಲ್ಲಿ ಭಾರತೀಯ ಜನತಾ ಪಕ್ಷದ ಪ್ರತಿನಿಧಿಯಾಗಿ ಮೂರು ದಶಕಗಳ ಹಿನ್ನೆಲೆಯನ್ನು ಹೊಂದಿದ್ದು ಕಾಂಗ್ರೆಸ್‍ನ ಭದ್ರಕೋಟೆಯಾಗಿದ್ದ ಕಾರ್ಕಳದಲ್ಲಿ ಭಾರೀ ಬಹುಮತದೊಂದಿಗೆ ವಿಜಯ ಪತಾಕೆಯನ್ನು ಹಾರಿಸಿದ್ದು ಒಂದು ಐತಿಹಾಸಿಕ ದಾಖಲೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಶಾಸಕಾರಿ ಆಯ್ಕೆಯಾಗಿ ಬಂದು ಪ್ರಸ್ತುತ ರಾಜ್ಯ ಸಚಿವರ ಸ್ಥಾನಮಾನ ಹೊಂದಿರುವ ಕರ್ನಾಟಕ ಸರಕಾರದ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿದ್ದು ಶ್ರೀ ವಿ.ಸುನಿಲ್ ಕುಮಾರ್ ರವರ ನಾಯಕತ್ವಕ್ಕೆ ಸಾಕ್ಷಿ.

ತನ್ನ ಶಾಸಕತ್ವದ ಪ್ರಥಮ ಅವಧಿಯಲ್ಲೇ ಎಲ್ಲಾ ಕಾನೂನಿನ ತೊಡಕುಗಳನ್ನು ಪರಿಹರಿಸಿ ಸರಕಾರದ ಸವಲತ್ತುಗಳನ್ನು ಪಡೆಯುವಲ್ಲಿ ಅವಕಾಶ ವಂಚಿತರಾದ ಜನರಿಗೆ ಪರಿಹಾರ. ಆ ನೆಲೆಯಲ್ಲಿ ಅತ್ಯಂತ ಬಡವರ ಮನೆಗೆ ದಾನಿಗಳ ನೆರವಿನಿಂದ ಮೂರು ಲಕ್ಷ ಹಂಚುಗಳ ಕೊಡುಗೆ. ಆ ಪ್ರಕ್ರಿಯೆಯನ್ನು ಈ ತನಕವೂ ಮುಂದುವರೆಸಿಕೊಂಡು ಬಂದಿರುವುದು ಒಂದು ಐತಿಹಾಸಿಕ ಸಾಧನೆ.

ಜಾತಿ ತಾರತಮ್ಯವನ್ನು ಹೋಗಲಾಡಿಸಿ ದುಂದುವೆಚ್ಚವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಸಾಮೂಹಿಕ ವಿವಾಹ ಪರಿಕಲ್ಪನೆಯನ್ನು ಸಾಕಾರಗೊಳಿಸಿ ತಾನೂ ಕೂಡ ಸಾಮೂಹಿಕ ವಿವಾಹದಲ್ಲೇ ಮದುವೆಯಾಗಿ ಸಮಾಜಕ್ಕೆ ಅನುಸರಣೀಯವಾದುದು. ಕ್ಷೇತ್ರದ ಜನರ ಉಪಯೋಗಕ್ಕಾಗಿ ಉದ್ಯೋಗ ಮೇಳ ನಡೆಸಿ ಅನೇಕ ಜನರಿಗೆ ಉದ್ಯೋಗ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕ ಕಾಳಜಿ. 2000 ಉದ್ಯೋಗಾಂಕ್ಷಿಗಳು, 50 ಕಂಪನಿಗಳು ಭಾಗವಹಿಸಿ 600 ಕ್ಕೂ ಹೆಚ್ಚು ಜನರಿಗೆ ಹೊಟ್ಟೆ ಹೊರೆಯುವ ಕಾಯಕ.

ಹಿಂದು ಪರ ಹೋರಾಟಗಾರರಾಗಿ ರಾಜಾದಾದ್ಯಂತ ಪ್ರವಾಸ ಮಾಡಿದ್ದ ಇವರು ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ನಡೆಸಿ ಅಧಿವೇಶನದ ಸಂದರ್ಭದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ. ಹಿಂದುಗಳ ಆರಾಧ್ಯ ದೇವರಾದ ಶ್ರೀ ರಾಮಚಂದ್ರನೇ ನಿರ್ಮಿಸಿದ ರಾಮಸೇತುವನ್ನು ಧ್ವಂಸ ಮಾಡಲು ಹೊರಟ ಸರಕಾರಗಳ ಹುನ್ನಾರದ ವಿರುದ್ಧ ದ್ವನಿಯೆತ್ತಿ ಜಾಗೃತಿ ಮೂಡಿಸಿ ಸಾವಿರಾರು ಜನರನ್ನು ಸಂಘಟಿಸಿ ರಾಮೇಶ್ವರದಲ್ಲಿ ನಡೆದ ಬೃಹತ್ ಪ್ರತಿಭಟನೆಗೆ ಪಾಲ್ಗೊಂಡಿದ್ದು. ರಾಜಕೀಯದಲ್ಲಿ ಗುರುತರ ಜವಾಬ್ದಾರಿಯನ್ನು ನಿಭಾಯಿಸಿದ ಹೆಗ್ಗಳಿಕೆ. 

ಬಾಜಪದ ರಾಜ್ಯ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಯುವ ಮೋರ್ಚಾದ ಕಾರ್ಯದರ್ಶಿಯಾಗಿ ಸೇವೆ, ಗೋವಾ ಚುನಾವಣೆಯ ಉಸ್ತುವಾರಿ ವಹಿಸಿ ರಾಜಕೀಯ ಪ್ರಬುದ್ಧತೆಯ ಪ್ರದರ್ಶನ. ರಾಜ್ಯ ಯುವಮೋರ್ಚಾ ಅಧ್ಯಕ್ಷರಾಗಿ ಮೂರು ವರ್ಷ ರಾಜ್ಯದಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಹಲವು ಯಶಸ್ವಿ ಸಮಾವೇಶಗಳ ಸಂಯೋಜನೆ. ವಿನೂತನ ರೀತಿಯ ಸಮಾವೇಶಗಳು, ಅಭ್ಯಾಸ ವರ್ಗಗಳ ಸಂಯೋಜನೆ.

ದೇಶದಲ್ಲೇ ಪ್ರಥಮ ಬಾರಿಗೆ ಒಂದು ವಿಧಾನ ಸಭಾ ವ್ಯಾಪ್ತಿಯಲ್ಲಿ ಅಭೂತ ಪೂರ್ವ ಮಹಿಳಾ ಸಮಾವೇಶವನ್ನು ಸಂಘಟಿಸಿ ಹನ್ನೆರಡು ಸಾವಿರ ಮಹಿಳೆಯರನ್ನು ಬಾಜಪದ ಪತಾಕೆಯಡಿ ಸೇರಿಸಿದ ಪರಾಕ್ರಮ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮಾವೇಶವನ್ನು ಸಂಘಟಿಸಿ ಒಂದು ವಿಧಾನಸಭಾ ವ್ಯಾಪ್ತಿಯಲ್ಲಿ ಎರಡು ಸಾವಿರ ಜನರನ್ನು ಸೇರಿಸಿದ ಪ್ರಯತ್ನ.

ಯಾಶೀಲತೆ ಮತ್ತು ಜನಪರ ಕಾಳಜಿಯಿಂದ ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಸಂಪರ್ಕ ಸಾಧಿಸಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ. 91 ಊರುಗಳಿಗೆ ವಿದ್ಯುತ್ ಸಂಪರ್ಕ, ಕುಗ್ರಾಮಗಳಿಗೆ ರಸ್ತೆ, ಸೇತುವೆಗಳ ನಿರ್ಮಾಣ, ಕಾರ್ಕಳದ ಇತಿಹಾಸದಲ್ಲೇ ಮೊದಲ ಬಾರಿಗೆ ಕೇಂದ್ರ ಸರಕಾರದಿಂದ 87 ಕೋಟಿ ಅನುದಾನ ತರಿಸಿದ ಕೀರ್ತಿ.

ಅಧಿವೇಶನದಲ್ಲಿ 100% ಭಾಗವಹಿಸಿದ್ದು ಪಡಿತರ ಚೀಟಿ, ಭಯೋತ್ಪಾದನೆ ಇತ್ಯಾದಿ ಹತ್ತು ಹಲವು ವಿಷಯಗಳ ಪ್ರಸ್ತಾಪ, ವಿಸೃತ ಚರ್ಚೆ, ಯಶಸ್ವಿ ಪಾಲ್ಗೊಳ್ಳುವಿಕೆಯಿಂದ ಹಲವು ಸಮಸ್ಯೆಗಳಿಗೆ ಪರಿಹಾರ. ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಜನಪ್ರತಿನಿಧಿಗಳಲ್ಲಿ ಮುಂಚೂಣಿ ಸಾಲಿನಲ್ಲಿರುವ ಶಾಸಕ ಜನನಾಯಕ.

ಕಾರ್ಕಳ ತಾಲೂಕಿನ ಅತ್ಯಂತ ಕುಗ್ರಾಮಗಳ ಕಾಡಿನಲ್ಲಿ ಹತ್ತಾರು ವರ್ಷಗಳಿಂದ ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ವಾಸವಿರುವ, ಈ ತನಕ ಯಾರೂ ಗಮನ ಹರಿಸದ ಬಡ ಮಲೆಕುಡಿಯ ಜನಾಂಗದ ನೊವುಗಳನ್ನು ಆಲಿಸಿದ ಮೊದಲ ಶಾಸಕ. ನಕ್ಸಲ್ ಪೀಡಿತ ಪ್ರದೇಶದ ಜನರ ಬಳಿ ಸಾಗಿ ಅವರೊಂದಿಗೆ ಮುಕ್ತ ಚರ್ಚೆ ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಗಂಭೀರ ಪ್ರಯತ್ನ.

ಪ್ರಸ್ತುತ ಇರುವ ಭೀಕರ ಸಮಸ್ಯೆಗಳಾದ ವಾತಾವರಣದಲ್ಲಿ ಏರುತ್ತಿರುವ ಉಷ್ಣತೆ ಮತ್ತು ಕುಸಿಯುತ್ತಿರುವ ಅಂತರ್ಜಲ ಇವುಗಳಿಂದಾಗಿ ಕಾರ್ಕಳ ತಾಲೂಕಿಗೂ ಬಿಸಿ ಮುಟ್ಟಿರುವ ನೀರಿನ ಸಮಸ್ಯೆಯಿಂದ ಜನರು ಎಚ್ಚೆತ್ತು ಕೊಳ್ಳಬೇಕೆಂಬ ದೃಷ್ಟಿಯಿಂದ ತನ್ನ ಕ್ಷೇತ್ರವಿಡೀ ಜಾಗೃತಿ ಕಾರ್ಯಕ್ರಮ “ಒಂದು ಜನ-ಒಂದು ಸಸಿ, ಒಂದು ಮನೆ – ಒಂದು ಇಂಗುಗುಂಡಿ” ಎಂಬ ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ಹಳ್ಳಿ ಹಳ್ಳಿಗಳನ್ನು ಸಂಚರಿಸಿ, ಯುವಕರನ್ನು ವಿವಿಧ ಸಂಘಟನೆಗಳನ್ನು ಒಟ್ಟುಗೂಡಿಸಿದ ದೇಶದ ಮೊದಲ ಪರಿಸರ ಸ್ನೇಹ ಶಾಸಕ ಎಂಬ ಬಿರುದು.

40 ಕೋಟಿಗೂ ಹೆಚ್ಚು ಅನುದಾನವನ್ನು ಬಲಸಿಕೊಂಡು 50ಕ್ಕೂ ಹೆಚ್ಚು ಕಿಂಡಿ ಅಣೆಕಟ್ಟುಗಳನ್ನು ನಿರ್ಮಾಣಕ್ಕೆ ಚಾಲನೆ ನೀಡಿ, ರೈತರ ಬೆಳೆಗಳಿಗೆ ಉಂಟಾಗುವ ನೀರಿನ ಸಮಸ್ಯೆಯಿಂದ ಹೊರಬರಲು ಭಗೀರಥ ಪ್ರಯತ್ನ ಮಾಡಿರುವುದು ರಾಜ್ಯದಲ್ಲಿ ದಾಖಲೆಯೇ ಸರಿ.

ಬಡ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಕಳದಲ್ಲಿ ಪಾಲಿಟೆಕ್ನಿಕ್ ಕಾಲೇಜು, ಮಿಯ್ಯಾರಿನ ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕಾರ್ಕಳ ತಾಲೂಕಿನ ಬಹುತೇಕ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಪುನಶ್ಚೇತನ. ತುಳುನಾಡಿನ ಅಮರ ವೀರರಾದ ಕೋಟಿ ಚೆನ್ನಯರ ಹೆಸರಿನಲ್ಲಿ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೋಟಿ ಚೆನ್ನಯ ಥೀಂ ಪಾರ್ಕ್ ನಿರ್ಮಾಣ. ಕಾರ್ಕಳ ಹಿರಿಯಂಗಡಿ ಬಳಿ ಅರುವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ.

ಕ್ರೀಡೆಯಲ್ಲಿ ವಿಶೇಷ ಒಲವು ಹೊಂದಿರುವ ಇವರು ಕಾರ್ಕಳ ತಾಲೂಕಿನಲ್ಲಿ ಸುಸಜ್ಜಿತವಾದ ಕ್ರೀಡಾಂಗಣಗಳ ನಿರ್ಮಿಸುವಲ್ಲಿ ಎಡೆಬಿಡದ ಪ್ರಯತ್ನ. ಕ್ರೀಡಾಸಕ್ತರಿಗಾಗಿ ಈಜುಕೊಳದ ನಿರ್ಮಾಣ. ನಾಡು-ನುಡಿ ಮತ್ತು ಗ್ರಾಮೀಣ ಸಂಸ್ಕøತಿಯ ಬಗೆಗೆ ವಿಶೇಷ ಒಲವು ಹೊಂದಿರುವ ಶಾಸಕರು, ಆಧುನಿಕ ಭರಾಟೆಯಲ್ಲಿ ತೆರೆಯ ಮರೆಗೆ ಸರಿಯುತ್ತಿರುವ ಗ್ರಾಮೀಣ ಸಂಸ್ಕøತಿ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಸಲುವಾಗಿ ಆಟಿ ತಿಂಗಳ ಆಚರಣೆ, ದೀಪಾವಳಿ ಆಚರಣೆಗಳು, ‘ಆಟಿಡೊಂಜಿ ಕಮಲ ಕೂಟ’ ದಂತಹ ಕಾರ್ಯಕ್ರಮಗಳ ಮೂಲಕ ಮಣ್ಣಿನ ಸಂಸ್ಕತಿ ಮತ್ತು ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸಿದ್ದು ಜನಜನಿತ.

ಜನರ ಭಾವನೆಗಳಿಗೆ ಧಕ್ಕೆಯಾದಾಗ ಜೀವನವನ್ನು ಕಸಿದುಕೊಳ್ಳುವ ಯತ್ನಗಳಾದಾಗಲೆಲ್ಲಾ ತೀವ್ರವಾದ ಹೋರಾಟಗಳನ್ನು ಸಂಘಟಿಸಿ ಹಳ್ಳಿಯಿಂದ ರಾಜ್ಯ ರಾಜಧಾನಿಯವರೆಗೂ ಗಮನ ಸೆಳೆದು ನ್ಯಾಯಕ್ಕಾಗಿ ಹೋರಾಡುವ ಛಲ. ವಿದ್ಯುತ್ ಕಡಿತ, ಮರಳು ನೀತಿ, ಭ್ರಷ್ಟಾಚಾರ, ನಕ್ಸಲ್ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಹುಲಿಯೋಜನೆ ಇವೇ ಮೊದಲಾದ ವಿಚಾರಗಳ ಕುರಿತಾಗಿ ತೀವ್ರವಾದ ಹೋರಾಟ ಸಂಘಟಿಸಿ ಸರಕಾರದ ಕಣ್ತೆರೆಸುವ ಕೆಲಸ.

“ಯುವ ಶಕ್ತಿ ರಾಷ್ಟ್ರ ಶಕ್ತಿ” ಎಂಬ ವಿಚಾರವನ್ನು ಮನಗಂಡು ಕಾರ್ಕಳದ ಯುವ ಶಕ್ತಿಯ ಅನಾವರಣಕ್ಕೆ ಪ್ರಯತ್ನ. ಯುವ ಕಾರ್ಯಕರ್ತರ ಯುವ ಸಂಕಲ್ಪ ಸಮಾವೇಶ, ಮಹಾ ಸಂಪರ್ಕ ಅಭಿಯಾನ ಮುಂತಾದ ವಿನೂತನ ಸಂಘಟನಾ ಚತುರತೆ. ಬಡರೋಗಿಗಳಿಗೆ ಅತ್ಯುತ್ತಮ ಸೇವೆ ಲಭ್ಯವಾಗಬೆಕೆಂಬ ಕಾರಣಕ್ಕಾಗಿ ಕರ್ನಾಟಕದಲ್ಲಿ ಬಾಜಪ ಸರಕಾರವಿದ್ದು ಸನ್ಮಾನ್ಯ ಆರ್. ಅಶೋಕ್ ರವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಸುಸಜ್ಜಿತವಾದ ವ್ಯವಸ್ಥೆಗಳನ್ನು ಕಲ್ಪಸಿದ್ದು. ಇದೀಗ 6 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ. 

ಮಿಯ್ಯಾರಿನಲ್ಲಿ 120 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ಪಾಂಗಣ ರಚನೆ. ಕಾರ್ಕಳ ತಾಲೂಕಿನಾದ್ಯಂತ ಬದಲಾದ ರಸ್ತೆಗಳು, ಸುಂದರವಾದ ರಸ್ತೆಗಳು ವಿ. ಸುನಿಲ್ ಕುಮಾರ್‍ರವರ ಕರ್ತತ್ವ ಶಕ್ತಿಗೆ ಉದಾಹರಣೆ. ಪುಲ್ಕೆರಿ ಜಂಕ್ಷನ್‍ನಿಂದ ಜೋಡುರಸ್ತೆಯನ್ನು ಸಂಪರ್ಕಿಸುವ ರಸ್ತೆ, ಬೈಲೂರಿನ ರಸ್ತೆ ಹೀಗೆ ಜನ ಜೀವನವನ್ನು ಬೆಸೆಯುವ ರಸ್ತೆಗಳು ಶಾಸಕರು ಕ್ಷೇತ್ರದ ಪ್ರಗತಿಯ ಬಗೆಗೆ ಹೊಂದಿರುವ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ.

ಕೇಂದ್ರ ಸರಕಾರದ 39 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ-ಸಾಣೂರು-ಬೆಳುವಾಯಿಯನ್ನು ಸಂಪರ್ಕಿಸುವ ರಸ್ತೆ, 29 ಕೋಟಿ ರೂಪಾಯಿ ಅನುದಾನದೊಂದಿಗೆ ಕಾರ್ಕಳ – ಬಜಗೋಳಿ-ಮಾಳಗಳನ್ನು ಸಂಪರ್ಕಿಸುವ ರಸ್ತೆಗಳು ಅತ್ಯಂತ ಕಡಿಮೆ ಅವದಿಯಲ್ಲಿಮಾಡಿ ಮುಗಿಸಿದ್ದರು. 

​ಹೈಕಮಾಂಡ್ ನವರೊಂದಿಗೆ ಬಲು ಸಲಿಗೆಯಲ್ಲಿರುವ ಶಾಸಕ ಸುನಿಲ್ ಕುಮಾರ್ ರವರಿಗೆ ಈ ಬಾರಿ ಸಚಿವ ಸ್ಥಾನ ನೀಡುವಲ್ಲಿ ಹೆಚ್ಚಿನ ಒಲವು ತೋರಿಸುತ್ತಿದೆ. ಈ ಹಿಂದೆ ಶಾಸಕರ ರಘುಪತಿ ಭಟ್ ಕೂಡ ಸುನಿಲ್ ಕುಮಾರ್ ಪರ ಬ್ಯಾಟಿಂಗ್ ಮಾಡಿರುವುದನ್ನು ಇಲ್ಲ ನೆನಪಿಸಿಕೊಳ್ಳಬಹುದು.    

 
 
 
 
 
 
 
 
 
 
 

Leave a Reply