ಕೊಡವೂರು: ಸಾಮೂಹಿಕ ಬ್ರಹ್ಮೋಪದೇಶ

ಮಲ್ಪೆ: ವರ್ಷಂಪ್ರತಿಯಂತೆ ಈ ಬಾರಿಯೂ ಕೊಡವೂರು ಬ್ರಾಹ್ಮಣ ಮಹಾಸಭಾದ ವತಿಯಿಂದ ಸಮಾಜ ಬಾಂಧವರಿಗಾಗಿ “ಉಚಿತ ಸಾಮೂಹಿಕ ಬ್ರಹ್ಮೋಪದೇಶ” ಕಾರ್ಯಕ್ರಮವು ಜೂನ್ 19 ರಂದು ಕೊಡವೂರಿನ “ವಿಪ್ರಶ್ರೀ” ಸಾಂಸ್ಕೃತಿಕ ಕಲಾಭವನದಲ್ಲಿ ನಡೆಯಲಿದೆ.

ಭಾಗವಹಿಸುವ ವಟುಗಳಿಗೆ ಸಂಪೂರ್ಣ ಉಚಿತವಾಗಿ, ಶಾಸ್ತ್ರೋಕ್ತವಾಗಿ ಉಪನಯನ ಸಂಸ್ಕಾರವನ್ನು ಮಾಡಿಸಿಕೊಡಲಾಗುವುದು.

ಆಸಕ್ತ ಸಮಾಜ ಬಾಂಧವರು ಹೆಸರು ನೊಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಅಧ್ಯಕ್ಷ ಶ್ರೀ ಶ್ರೀನಿವಾಸ ಉಪಾಧ್ಯಾಯ (9611942534), ಧಾರ್ಮಿಕ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ ಭಟ್ (9663559122) ಅಥವಾ ಕಾರ್ಯದರ್ಶಿ ಶ್ರೀಮತಿ ಪೂರ್ಣಿಮಾ ಜನಾರ್ದನ (9481214104) ಇವರನ್ನು ಸಂಪರ್ಕಿಸಬಹುದು.

 
 
 
 
 
 
 
 
 
 
 

Leave a Reply