ಶ್ರೀ ಶಂಕರ ಜಯಂತಿ ಮಹೋತ್ಸವ

ದಿನಾಂಕ 1 ಮೇ ಭಾನುವಾರ ದಂದು ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ ಚಾಂತಾರು ದೇವುಬೈಲಿ ನಲ್ಲಿ ಶ್ರೀ ಶಂಕರತತ್ತ್ವ ಪ್ರಸರಣಾ ಅಭಿಯಾನ ಸಮಿತಿ ಬ್ರಹ್ಮಾವರ ತಾಲೂಕು ಇವರ ಪ್ರಾಯೋಜಕತ್ವ ದಲ್ಲಿ “ಶ್ರೀ ಶಂಕರ ಜಯಂತಿ ಮಹೋತ್ಸವ”ವು ಜರುಗಲಿದೆ.

ಸಂಜೆ 5 ಘಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶ್ರೀ ವಿಶ್ವನಾಥ ಶೆಟ್ಟಿ ಅಧ್ಯಕ್ಷರು ಶ್ರೀ ಶಂಕರ ತತ್ತ್ವ ಪ್ರಸರಣಾ ಸಮಿತಿ ವಹಿಸಲಿದ್ದು, ಮೋಗೆರಿ ಪಂಚಾಂಗ ಕರ್ತ ಶ್ರೀ ಜನಾರ್ದನ ಅಡಿಗರು ಉಪನ್ಯಾಸ ನೀಡಲಿದ್ದಾರೆ.

ನಂತರ ಶ್ರೀ ಚಂಡಿಕಾ ಪರಮೇಶ್ವರಿ ಮಹಿಳಾ ಭಜನಾ ಮಂಡಳಿ, ದೇವುಬೈಲು ಅವರಿಂದ ಭಜನಾ ಕಾರ್ಯಕ್ರಮ ವಿದ್ದು, ಆಸ್ತಿಕ ಮಹನೀಯರು ಭಾಗವಹಿಸಿ ಶ್ರೀ ಶಂಕರ ಭಗವತ್ಪಾದರ ಕೃಪೆಗೆ ಪಾತ್ರರಾಗಬೇಕೆಂದು ಸಂಘಟಕರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply