ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಹಾಗು ಪಲ್ಲಕ್ಕಿ ಉತ್ಸವ, ಪುಷ್ಪ ರಥೋತ್ಸವ    

ಉಡುಪಿ: ಕಲ್ಯಾಣಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ  ಗೀತಾ ಜಯಂತಿ ಅಂಗವಾಗಿ  ದೇವರಿಗೆ ವಿಶೇಷ ಅಲಂಕಾರ  ಹಾಗು ಪಲ್ಲಕ್ಕಿ ಉತ್ಸವ, ಪುಷ್ಪ ರಥೋತ್ಸವ  ನೆಡೆಯಿತು. ಪ್ರಧಾನ ಅರ್ಚಕ  ಜಯದೇವ ಭಟ್  ಧಾರ್ಮಿಕ ಪೂಜಾ ವಿಧಿ ವಿಧಾನಗಳನನ್ನು  ನೆಡಸಿಕೊಟ್ಟರು.ಆಡಳಿತ ಮುಕ್ತೇಸರ ಅನಂತಪದ್ಮನಾಭ ಕಿಣಿ, ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷರ  ಕೆ. ತುಳಸೀದಾಸ್ ಕಿಣಿ ಸೀತಾರಾಮ್ ಭಟ್, ಶ್ರೀನಿವಾಸ್ ಮಲ್ಯ, ದತ್ತಾತ್ರೇಯ ಕಿಣಿ, ಅರವಿಂದ ಬಾಳಿಗಾ, ಗಣಪತಿ ಭಟ್, ವಿನೋದ ಕಾಮತ್, ಕಾಶೀನಾಥ್ ಭಟ್, ಸುಬ್ಬಣ್ಣ ಪೈ,  ಲಕ್ಷ್ಮೀಶ ಭಟ್ ಜಿ., ಎಸ್ ಬಿ ಸಮಾಜದ ಯುವಕ, ಯುವತಿ ಮಂಡಳಿಯ ಸದಸ್ಯರು ಹಾಗು ಸಮಾಜ ಭಾಂದವರು ಉಪಸ್ಥಿತರಿದ್ದರು.

ಚಿತ್ರ : ದೇವದಾಸ್ ಕಾಮತ್   

 
 
 
 
 
 
 
 
 
 
 

Leave a Reply