ಬಾಗಿಲನು ಬಾಗಿಲನು ತೆರೆದು ಸೇವೆ ಮಾಡೋ ಅವಕಾಶ ನೀಡೋ ಕೃಷ್ಣ

ಉಡುಪಿ: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ  ಇಳಿಮುಖವಾಗುತ್ತಿ ರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ದೇವಾಲಯಗಳನ್ನು ತೆರೆಯಲು ಆದೇಶ ನೀಡಿದ್ದರೂ, ಇಲ್ಲಿನ ಶ್ರೀಕೃಷ್ಣಮಠಕ್ಕೆ ಇನ್ನೂ ಒಂದು ವಾರ ಕಾಲ ಭಕ್ತರಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.


ವಿಶ್ವವನ್ನೇ ಕಾಡುತ್ತಿರುವ ಸೋಂಕಿನಿಂದ ಪ್ರಪಂಚ ಮುಕ್ತವಾಗಲಿ ಎಂದು ಆಶಿಸಿದ ಶ್ರೀಪಾದರು, ಸರ್ಕಾರ ಕೋವಿಡ್ ನಿಯಮ ಪಾಲಿಸಿ ದೇವಳಗಳನ್ನು ತೆರೆಯಲು ಸೂಚನೆ ನೀಡಿದ್ದರೂ ಉಡುಪಿ ಕೃಷ್ಣಮಠಕ್ಕೆ ಇನ್ನೂ ಒಂದು ವಾರ ಕಾಲ ಭಕ್ತಾದಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ.  

ಹೊರ ರಾಜ್ಯ ಇತ್ಯಾದಿಗಳಿಂದ ಆಗಮಿಸುವ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು, ಪರಿಸ್ಥಿತಿ ಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಮಠದ ವ್ಯವಸ್ಥಾಪಕರು ನಿರ್ಧರಿಸುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ

 
 
 
 
 
 
 
 
 
 
 

Leave a Reply