ವಿಶ್ವವನ್ನೇ ಕಾಡುತ್ತಿರುವ ಸೋಂಕಿನಿಂದ ಪ್ರಪಂಚ ಮುಕ್ತವಾಗಲಿ ಎಂದು ಆಶಿಸಿದ ಶ್ರೀಪಾದರು, ಸರ್ಕಾರ ಕೋವಿಡ್ ನಿಯಮ ಪಾಲಿಸಿ ದೇವಳಗಳನ್ನು ತೆರೆಯಲು ಸೂಚನೆ ನೀಡಿದ್ದರೂ ಉಡುಪಿ ಕೃಷ್ಣಮಠಕ್ಕೆ ಇನ್ನೂ ಒಂದು ವಾರ ಕಾಲ ಭಕ್ತಾದಿಗಳಿಗೆ ಅವಕಾಶ ನೀಡಲಾಗುತ್ತಿಲ್ಲ.
ಹೊರ ರಾಜ್ಯ ಇತ್ಯಾದಿಗಳಿಂದ ಆಗಮಿಸುವ ಭಕ್ತಾದಿಗಳನ್ನು ಗಮನದಲ್ಲಿಟ್ಟುಕೊಂಡು, ಪರಿಸ್ಥಿತಿ ಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಮಠದ ವ್ಯವಸ್ಥಾಪಕರು ನಿರ್ಧರಿಸುತ್ತಾರೆ ಎಂದು ಶ್ರೀಗಳು ತಿಳಿಸಿದ್ದಾರೆ