ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ “ಭಜನ್ ಸಂಕೀರ್ತನೆ”

ಪುರುಷೋತ್ತಮ ಮಾಸದ ವಿಶೇಷ ಭಜನಾ ಕಾರ್ಯಕ್ರಮದ ಅಂಗವಾಗಿ
ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ Youth of GSB Naikanakatte ಭಜನಾ ತಂಡದವರಿಂದ “ಭಜನ್ ಸಂಕೀರ್ತನೆ” ನಡೆಯಿತು. ಹಾರ್ಮೋನಿಯಂ ನಲ್ಲಿ ವಿಘ್ನೇಶ್ ಭಂಡಾರ್ಕರ್,ತಬ್ಲಾದಲ್ಲಿ ಶ್ರೀಶ ಭಟ್ ಮತ್ತು ಆದಿನಾಥ ಕಿಣಿ ಸಾತ್ ನೀಡಿದರು. ಸೇವಾದಾರರು ದಿ.ಸರಸ್ವತಿ ದೇವಣ್ಣ ಪೈ ಯವರ ಸ್ಮರಣಾರ್ಥ ಅವರ ಮಕ್ಕಳು ಮೊಮ್ಮಕ್ಕಳು ನಾಯ್ಕನಕಟ್ಟೆ ಮತ್ತು ಪೈ ಕುಟುಂಬದವರು,ಟ್ರಸ್ಟ್ ಅಧ್ಯಕ್ಷ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ್‌ ಪೈ,ಸೇವಾ ಸಮಿತಿಯ ಸದಸ್ಯರು,ಅರ್ಚಕ ಶ್ರೀ ಬಾಲಕೃಷ್ಣ ಭಟ್, ಊರಿನ ಹತ್ತು ಸಮಸ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply