ಕಲ್ಯಾಣಪುರ ಶ್ರೀ ವೆ೦ಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಆದಿತ್ಯವಾರ ಮುಂಜಾನೆ ವಿಶ್ವರೂಪ ದರ್ಶನ ಜರಗಿತು. ಸಾವಿರಾರು ಹಣತೆ ದೀಪಗಳ ನಡುವೆ ಮೂಡಿಬಂದ “ಭಾರತ್ ” ಹೂವಿನ ರಂಗವಲ್ಲಿ ರಚಿಸಿದ ಶ್ರೀ ವೆಂಕಟರಮಣ, ಭಕ್ತರ ಮನ ಸೆಳೆಯಿತು.
ಶ್ರೀ ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗು ಮಹಾ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯತು. ಆಡಳಿತ ಮೊಕ್ತೇಸರ ಕೆ ಅನ೦ತಪದ್ಮನಾಭ ಕಿಣಿ, ಅರ್ಚಕರಾದ ಜಯದೇವ ಭಟ್ ,ಗಣಪತಿ ಭಟ್ ಹಾಗೂ ಆಡಳಿತ ಮ೦ಡಳಿಯ ಸದಸ್ಯರು ಮತ್ತು ಜಿಎಸ್ ಬಿ ಸಭಾ ಸದಸ್ಯರು ಹಾಗೂ ಸಮಾಜ ಭಾ೦ಧವರು ಈ ಸ೦ದರ್ಭದಲ್ಲಿ ಉಪಸ್ಥಿತರಿದ್ದರು.