ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ನವರಾತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ : ಕಡಿಯಾಳಿ ಶ್ರೀ ಮಹಿಷಮರ್ದಿನಿ ಸನ್ನಿಧಿಯಲ್ಲಿ ವರ್ಷಂಪ್ರತಿ ನಡೆಯುವ ನವರಾತ್ರಿ ಮಹೋತ್ಸವ ಕಾರ್ಯಕ್ರಮವು ದಿ. 07-10-2021 ರಿಂದ 15-10-2021 ರವರಗೆ ವೈಭವಯುತವಾಗಿ ನಡೆಯಲಿದೆ.

ಆದರ ಪ್ರಯುಕ್ತ ಇಂದು ಶ್ರೀ ದೇವಳದಲ್ಲಿ ಆಮಂತ್ರಣ ಪತ್ರಿಕೆಯನ್ನು ಶ್ರೀದೇವಿಗೆ ಸಮರ್ಪಿಸಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನಾಗೇಶ್ ಹೆಗ್ಡೆ, ಅನಿಶ್ ಟ್ರೇಡರ್ಸ್ ನ ಮಾಲಕ ಅನಿಶ್ ಪೈ, ರಾಧಾ ಕಾಂಪ್ಲೆಕ್ಸ್ ನ ಮಾಲಕ ಬಾಲಕೃಷ್ಣ ಜೋಗಿ ಕಡಿಯಾಳಿ ಆಮಂತ್ರಣಪತ್ರಿಕೆ ಬಿಡುಗಡೆಗೊಳಿಸಿದರು.

ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ನಗರಸಭಾ ಸದಸ್ಯರಾದ ಗೀತಾ ಶೇಟ್, ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಸದಸ್ಯ ನಾಗರಾಜಶೆಟ್ಟಿ, ಮಂಜುನಾಥ್ ಹೆಬ್ಬಾರ್, ಗಣೇಶ್ ನಾಯ್ಕ, ಸಂಧ್ಯಾ ಪ್ರಭು, ಶಶಿಕಲಾ ಭರತ್, ಅರ್ಚಕ ಶ್ರೀರಂಗ ಉಪಾಧ್ಯಾಯ, ಜೀರ್ಣೋದ್ದಾರ ಸಮಿತಿಯ ಸದಸ್ಯಮುರಳಿ ಕೃಷ್ಣ ಉಪಾಧ್ಯ, ಜೀವರತ್ನ ದೇವಾಡಿಗ, ವೆಂಕಟಾಚಲ ಜೋಯಿಸ, ಯಹರಿಪ್ರಸಾದ್ ಕಡಿಯಾಳಿ,ಭಾರತೀ ಚಂದ್ರಶೇಖರ್, ಮಾಧವ ಭಟ್,ಹಾಗೂ ಊರಿನ ಹಿರಿಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply