ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು , ಶ್ರೀ ಸೋದೆ ವಾದಿರಾಜ ಮಠ, ಮತ್ತು ಶ್ರೀ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಶ್ರೀ ಅದಮಾರು ಮಠ ಉಡುಪಿ. ಇವರ ಆಶೀರ್ವಾದದೊಂದಿಗೆ ವೇದ ಮೂರ್ತಿ ಪುತ್ತೂರು ಶ್ರೀಶ ತಂತ್ರಿ ಮತ್ತು ವೇದಮೂರ್ತಿ ಕುತ್ಪಾಡಿ ಬಾಲಕೃಷ್ಣ ಭಟ್ ಇವರ ನೇತೃತ್ವದಲ್ಲಿ ಮಹತೋಭಾರ ಶ್ರೀ ಸಿದ್ಧಿ ವಿನಾಯಕ ದೇವರಿಗೆ ನವೀಕೃತ ತಾಮ್ರ ಸುತ್ತುಪೌಳಿ ಸಮರ್ಪಣೆ, ಬ್ರಹ್ಮಕುಂಭಾ ಭಿಷೇಕ ಹಾಗೂ ರಾಶಿಪೂಜಾ ಮಹೋತ್ಸವ ಸಂಪನ್ನಗೊಳ್ಳಲಿರುವುದು.
ದಿನಾಂಕ 19.05.2023ರ ಶುಕ್ರವಾರದಂದು ಅಪರಾಹ್ನ 3.30ಕ್ಕೆ ಅಂಬಲ್ಪಾಡಿ ದೇವಸ್ಥಾನದಿಂದ ವಾಹನ ಮುಖಾಂತರ ಆರಂಭಗೊಳ್ಳುವ ಹೊರೆಕಾಣಿಕೆ ಮೆರವಣಿಗೆಗೆ ಅಂಬಲ್ಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ। ನಿ. ಬಿ. ವಿಜಯ ಬಲ್ಲಾಳರು ಚಾಲನೆ ನೀಡಲಿರುವರು. ಮೆರವಣಿಗೆಯು ಕಿದಿಯೂರು, ಕಡೇಕಾರು, ಕುತ್ಪಾಡಿ, ಸಂಪಿಗೆನಗರ, ಗುಡ್ಡೆಅಂಗಡಿಯಾಗಿ ಶಂಭುಕಲ್ಲು ದೇವಸ್ಥಾನದ ಬಳಿಕ ಪಾದಯಾತ್ರೆ ಮೂಲಕ ಮಠದಂಗಡಿಗಾಗಿ ದೇವಸ್ಥಾನ ತಲುಪುವುದು.
ದಿನಾಂಕ 21.05.2023ರ ಆದಿತ್ಯವಾರದಂದು ಬೆಳಿಗ್ಗೆ 9.15ಕ್ಕೆ ಮಿಥುನ ಲಗ್ನದಲ್ಲಿ ಶ್ರೀ ಸಿದ್ಧಿ ವಿನಾಯಕ ದೇವರಿಗೆ ಬ್ರಹ್ಮಕುಂಭಾಭಿಷೇಕ, ಬಳಿಕ ಮಹಾಪೂಜೆ ಹಾಗೂ ಮಹಾ ಅನ್ನ ಸಂತರ್ಪಣೆ ಜರಗಲಿರುವುದು. ದಿನಾಂಕ 23.04.2023 ನೇ ಮಂಗಳವಾರದಂದು ಬೆಳಿಗ್ಗೆ 5.38ರಿಂದ ವೃಷಭ ಲಗ್ನ ದಲ್ಲಿ ರಾಶಿಪೂಜೆ ಮಹೋತ್ಸವವು ಆರಂಭ ಗೊಂಡು ದಿನಾಂಕ 24.05.3023 ನೇ ಬುಧವಾರ ಬೆಳಿಗ್ಗೆ 5.24ರ ಮೇಷ ಲಗ್ನದಲ್ಲಿ ಪರಿಸಮಾಪ್ತಿ ಗೊಳ್ಳಲಿರುವುದು.
ಈ ಮಧ್ಯೆ ಅಹೋ ರಾತ್ರಿ ಅಖಂಡ ಭಜನೆ ಹಾಗೂ ನಿರಂತರ ಊಟ- ಉಪಹಾರದ ವ್ಯವಸ್ಥೆಯನ್ನು ಮಾಡ ಲಾಗುವುದು. ದಿನಾಂಕ 17.05.2023ರಿಂದ 24.05.2023ರ ಪರ್ಯಂತ ಪ್ರತಿ ದಿನ ಧಾರ್ಮಿಕ ಕಾರ್ಯಕ್ರಮಗಳಲ್ಲದೆ ಪ್ರವಚನ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು, ನಿರಂತರ ಭಜನೆ ನಡೆಯಲಿರುವುದು ಎಂದು ಸಮಿತಿ ಕಾರ್ಯಾಧ್ಯಕ್ಪ ಉದಯಕುಮಾರ್ ಶೆಟ್ಟಿ ತಿಳಿಸಿದರು.