ನಗರಸಭಾ ಸದಸ್ಯ ಯೋಗೀಶ್ ಸಾಲ್ಯಾನ್ ಮೇಲೆ ಹಲ್ಲೆ ಯತ್ನ

ಭಾನುವಾರ ಸಂಜೆ ಪರ್ಕಳ ಪೇಟೆಯಲ್ಲಿ ಬೈಕ್‌ ಮತ್ತು ಕಾರಿನ ನಡುವೆ ಅಫಘಾತ ಸಂಭವಿಸಿದ್ದು, ನಡುಪೇಟೆಯಲ್ಲಿ ಎರಡು ತಂಡಗಳು ಮಾತಿನ ಚಕಮಕಿಯಲ್ಲಿ ತೊಡಗಿದ್ದು,  ಇದರಿಂದ ಟ್ರಾಫಿಕ್‌ ಜಾಮ್‌ ಉಂಟಾದ ಹಿನ್ನಲೆಯಲ್ಲಿ ಉಡುಪಿ ನಗರಸಭಾ ಸದಸ್ಯ ಯೋಗಿಶ್‌ ಸಾಲಿಯಾನ್‌ ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದು ಈ ವೇಳೆ ಗುಂಪೊಂದು ಹಲ್ಲೆಗೆ ಯತ್ನ ನಡೆಸಿದೆ. 

ಬಳಿಕ ಮಣಿಪಾಲ ಕಡೆ ಬರುತ್ತಿದ್ದ ಸಮಯದಲ್ಲಿ ತಂಡ ಹಿಂಬಾಲಿಸಿಕೊಂಡು ಬಂದು ಸಾಲ್ಯಾನ್ ಬೈಕಣ್ಣು ಅಡ್ಡಗಟ್ಟಿದ್ದರು. ಅಲ್ಲಿಂದ ಕೂಡಲೇ ಮಣಿಪಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡು ತಂಡಗಳನ್ನು ಠಾಣೆಗೆ ಕರೆಯಿಸಿ ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.  

ಮಾಹಿತಿ ತಿಳಿದು ನೂರಾರು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಠಾಣೆಗೆ ಆಗಮಿಸಿದಾಗ ಹಲ್ಲೆ ನಡೆಸಲು ಯತ್ನಿಸಿದ ತಂಡ ಅಲ್ಲಿಂದಕಾಲ್ಕಿತ್ತಿರು. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 
 
 
 
 
 
 
 
 
 
 

Leave a Reply