​ಸಂವಿಧಾನವು ​ರಾಷ್ಟ್ರದ ಚಾಲನಾ ಶಕ್ತಿಯಾಗಿದೆ​~ ​ಎನ್ ನಿತ್ಯಾನಂದ

“ಸಂವಿಧಾನದ ಆಶಯವನ್ನು ಅರ್ಥಮಾಡಿಕೊಂಡಾಗ ಮಾತ್ರ ಸಂವಿಧಾನದ ಮಹತ್ವವನ್ನು ತಿಳಿಯುವುದು ಸಾದ್ಯ. ಸಂವಿಧಾನವು ​ರಾಷ್ಟ್ರದ ಆಧಾರ ಸ್ತಂಭವಾಗಿದ್ದು ಪ್ರಜಾಪ್ರಭುತ್ವ ವ್ಯವಸ್ತೆಯು ಸುಗಮವಾಗಿ ಕಾರ್ಯಾಚರಿಸಲು ಸಾದ್ಯವಾಗುತ್ತದೆ​. 

 ಸಂವಿಧಾನವು ನಮಗೆ ನೀಡಿರುವ ಹಕ್ಕು ಮತ್ತು ಸೌಲಭ್ಯಗಳನ್ನು ಅನುಭವಿಸಬೇಕಾದರೆ ನಾವು ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಡಾ. ಬಿ ಆರ್ ಅಂಬೇಡ್ಕರ್, ಬೆನೆಗಲ ನರಸಿಂಗ ರಾವ್ ಮುಂತಾದ ಗಣ್ಯರು ರೂಪಿಸಿರುವ ನಮ್ಮ ಸಂವಿಧಾನ ವಿಶ್ವದಲ್ಲಿಯೇ ಅತ್ಯಂತ ವಿಶಾಲವಾದ ಲಿಖಿತ ಸಂವಿಧಾನವಾಗಿದೆ”, ಎಂದು ಪೂರ್ಣಪ್ರಜ್ಞ ಕಾಲೇಜಿನ ರಾಜ್ಯ​ಶಾಸ್ತ್ರ  ಪ್ರಾಧ್ಯಾಪಕ ಶ್ರೀ ಎನ್ ನಿತ್ಯಾನಂದ ಅವರು ತಿಳಿಸಿದರು. 

ಅವರು ಪೂರ್ಣಪ್ರಜ್ಞ ಕಾಲೇಜಿನ ​ರಾಷ್ಟ್ರೀಯ ಸೇವಾ ಯೋಜನೆಯ ಘಟಕವು ನವೆಂಬರ್ ೨೬ ರಂದು ಹಮ್ಮಿಕೊಂಡ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ರಾಘವೇಂದ್ರ ಅವರು ವಿದ್ಯಾರ್ಥಿಗಳಿಗೆ ಸಂವಿಧಾನದ ತತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

 ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಡಾ. ರಮೇಶ್ ಟಿ. ಎಸ್ ಉಪಸ್ಥಿತರಿದ್ದರು ​ರಾಷ್ಟ್ರೀಯ  ಸೇವಾ ಯೋಜನೆ ಅಧಿಕಾರಿ ಕು. ಚೈತ್ರರವರು ​ಪ್ರಸ್ತಾಪಿಸಿದರು.  ಇನ್ನೋರ್ವ ಯೋಜನಾಧಿಕಾರಿಗಳಾದ ಸಂದೀಪ್ ಶೆಟ್ಟಿ ಇವರು ಸ್ವಾಗತಿಸಿದರು.​ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕಿಯರು ಪ್ರಾರ್ಥಿಸಿದರು. ಕು. ಸುಶ್ಮಿತಾ ವಂದಿಸಿದರು, ಕು. ಪ್ರೀತಿ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply