ಆಷಾಢ ಏಕಾದಶಿ ಜನಪ್ರಿಯ ಭಜನಾಮಂಡಳಿ ಅಬುದಾಬಿ ಇವರಿಂದ ಭಜನ್’ಸಂಕೀರ್ತನೆ

ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಷಾಢ ಮಾಸದ ‘ದೇವಶಯನಿ ಏಕಾದಶಿ’ ಪ್ರಯುಕ್ತ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣದ ಬಳಿಕ ಅಬುದಾಬಿಯಲ್ಲಿ ವೃತ್ತಿ ಮಾಡುತ್ತಿರುವ ತೆಕ್ಕಟ್ಟೆ ಮೂಲದ ‘ಜನಪ್ರಿಯ ಭಜನಾ ಮಂಡಳಿ ಅಬುದಾಬಿ’ ಇವರಿಂದ “ಭಜನ್’ಸಂಕೀರ್ತನೆ” ಕಾರ್ಯಕ್ರಮ ಜರಗಿತು.

ಶ್ರೀ ಆನಂದ ಶ್ಯಾನುಭಾಗ್ ಹಾರ್ಮೋನಿಯಂ, ಹಾಗೂ ಕುಮಾರಿ ನಿಹಾರಿಕಾ ತಬಲಾ ನುಡಿಸಿದರು.

ಶ್ರೀಮತಿ ಶಾಂತಿ, ಶ್ರೀಮತಿ ಸುಧಾ ಮತ್ತು ಕುಮಾರಿ ಹಂಸಿಕಾ ಅವರು ಭಜನ್’ ಸಂಕೀರ್ತನೆಯಲ್ಲಿ ಭಾಗವಹಿಸಿದರು.

ಅರ್ಚಕ ಶ್ರೀ ಬಾಲಕೃಷ್ಣ ಭಟ್ ಅವರು ಶ್ರೀ ದೇವರಿಗೆ ವಿಶೇಷ ಅಲಂಕಾರ ಪೂಜೆ,ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ವಿತರಿಸಿದರು.ಏಕಾದಶಿ ವಿಶೇಷ ಸೇವೆಯನ್ನು ‘ಸ್ವಯಂ ಸೇವಕರು ವೆಂಕಟರಮಣ ದೇವಸ್ಥಾನ ನಾಯ್ಕನಕಟ್ಟೆ’ ಇವರು ಪ್ರಾಯೋಜಿಸಿದರು.

ವೆಂಕಟರಮಣ ಸೇವಾಸಮಿತಿಯ ಟ್ರಸ್ಟ್’ನ ಅಧ್ಯಕ್ಷರು‌ ಉಪ್ರಳ್ಳಿ ನಾರಾಯಣ ಶ್ಯಾನುಭಾಗ್, ಕಾರ್ಯದರ್ಶಿ ರಮೇಶ್‌ ಪೈ,ಭಜನಾ ಸಂಚಾಲಕ ವಿನಾಯಕ ಕಾಮತ್, ಸಮಿತಿಯ ಸದಸ್ಯರು, ಭಕ್ತವೃಂದದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply