ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ ವತಿಯಿಂದ ಶ್ರೀ ಕೃಷ್ಣಾಪುರ ಮಠಾದೀಶರಿಗೆ ಪಾದಪೂಜೆ

ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಭಾವೀ ಪರ್ಯಾಯ ಮಠಾದೀಶರಾದ ಶ್ರೀ ಕೃಷ್ಣಾಪುರ ಮಠದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರನ್ನು ಬ್ರಾಹ್ಮೀ ಸಭಾಭವನಕ್ಕೆ ಅದ್ದೂರಿಯಿಂದ ಬರಮಾಡಿಕೊಂಡು ಅವರಿಗೆ ಪರಿಷತ್ತಿನ ಅಧ್ಯಕ್ಷರಾದ ಚೈತನ್ಯ ಎಂ.ಜಿ. ದಂಪತಿಗಳು ಫಲ ಪುಷ್ಪ ಸಮರ್ಪಿಸಿ
ಮಾಣಿಕ್ಯ ಮಂಗಳಾರತಿ ಬೆಳಗಿ ಗೌರವಪೂರ್ಣ ಪಾದಪೂಜೆಯನ್ನು ನೆರವೇರಿಸಿದರು. 
ಅನುಗ್ರಹ ಸಂದೇಶ ನೀಡಿದ ಶ್ರೀ ಕೃಷ್ಣಾಪುರ ಮಠಾದೀಶರು ಮುಂಬರುವ ಪರ್ಯಾಯ ಮಹೋತ್ಸವದಲ್ಲಿ ಪರಿಷತ್ತಿನ ಸರ್ವ ಸದಸ್ಯರು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಡಾ| ನಿ.ಬೀ. ವಿಜಯ ಬಲ್ಲಾಳ್, ಡಾ| ಸುನೀಲ್ ಸಿ. ಮುಂಡ್ಕೂರು, ಟಿ.ರಮೇಶ್ ಭಟ್ ಮೂಡುಬೆಟ್ಟು, ಕುಮಾರಸ್ವಾಮಿ ಉಡುಪ, ಕೆ.ರಘುಪತಿ ರಾವ್, ನಾರಾಯಣದಾಸ ಉಡುಪ, ರಾಜೇಶ್ ಭಟ್ ಪಣಿಯಾಡಿ ಮತ್ತಿತರರು ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply