ಎಸ್ .ಆರ್ ವಿಜಯಶಂಕರ್ ಅವರಿಗೆ ಅಕಲಂಕ ಪ್ರಶಸ್ತಿ

ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯಿಂದ ದಿವಂಗತ ಡಾ|ಉಪ್ಪಂಗಳ ರಾಮಭಟ್ಟ ಅವರ ಹೆಸರಿನ ದತ್ತಿ ನಿಧಿಯಿಂದ ನೀಡುವ ‘ಅಕಲಂಕ ಪ್ರಶಸ್ತಿಗೆ ‘ ಕನ್ನಡದ ಪ್ರಸಿದ್ಧ ಅಂಕಣಕಾರರಾಗಿರುವ ಎಸ್.ಆರ್ ವಿಜಯಶಂಕರ್ ಅವರನ್ನು ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ನೀಲಾವರ ಅಡಿಗರು ಆಯ್ಕೆ ಮಾಡಿದ್ದಾರೆ

ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಅಂಕಣ ಬರಹಗಾರರಾಗಿ, ಹಲವಾರು ಅಮೂಲ್ಯವಾದ ವಿಮರ್ಶಾ ಕೃತಿಗಳನ್ನು ಇವರು ಬರೆದಿದ್ದು, ಪ್ರಸ್ತುತ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಕೇಂದ್ರದ ಗೌರವ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿ ಪ್ರದಾನವು ಇದೇ ಬರುವ ಮೇ ತಿಂಗಳಲ್ಲಿ ಉಡುಪಿಯಲ್ಲಿ ನಡೆಯಲಿದ್ದು, ಪ್ರಶಸ್ತಿ ಪತ್ರ ,ಫಲಕ ಹಾಗೂ ರೂ. 10,000 ಗೌರವಧನ ಒಳಗೊಂಡಿರುತ್ತದೆ ಎಂದು ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ನರೆಂದ್ರ ಕುಮಾರ್ ಕೋಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply