ಕೊಡವೂರು. ಕೇಂದ್ರ – ರಾಜ್ಯದ ಯೋಜನೆ ಮನೆ ಮನಸ್ಸುಗಳಿಗೆ – ವಿಜಯ್ ಕೊಡವೂರು.

ನರೇಂದ್ರ ಮೋದಿಯ ಹುಟ್ಟುಹಬ್ಬದ ದಿನ, ಮೋದಿಯ ಅನುದಾನದಲ್ಲಿ ವಸತಿ ನಿರ್ಮಾಣ ಆಗಿದ್ದು ಇದರ ಗೃಹಪ್ರವೇಶ ಕೊಡವೂರಿನಲ್ಲಿ ನಡೆಯಿತು.

ಕಳೆದ 2 ವರ್ಷದ ಹಿಂದೆ ನೆರೆಯಲ್ಲಿ ಮನೆ ಕಳೆದು ಕೊಂಡವರಿಗೆ ನರೇಂದ್ರ ಮೋದಿಯವರ ಅನುದಾನದಲ್ಲಿ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಹೀಗೆ ಕೇಂದ್ರದ ಎಲ್ಲಾ ಅನುದಾನವನ್ನು ಬಳಸಿಕೊಂಡು ಪ್ರತಿಯೊಂದು ಮನೆ – ಮನಸ್ಸುಗಳಿಗೆ ಕೇಂದ್ರದ ಅನುದಾನವನ್ನು ಮುಟ್ಟಿಸುವಂತೆ ಕೊಡವೂರು ವಾರ್ಡಿನಲ್ಲಿ ಮಾಡಲಾಗಿದ್ದು ಇಂದು ಕೊಡವೂರಿನ ವಿವೇಕಾನಂದ ಮಾರ್ಗ ಅತ್ತಲಾಡಿ ಪರಿಸರದ ತೋಮ ಪೂಜಾರಿ ಇವರ ಗೃಹಪ್ರವೇಶವನ್ನು ಮಾಡಲಾಯಿತು.

ಈ ಸಂದರ್ಭದಲ್ಲಿ ಆ ಸಮಯದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿರುವ ಕೆ ಕಾರ್ತಿಕೇಯ ಭಟ್ ಇವರು ಮನೆಯ ನಿರ್ಮಾಣಕ್ಕೆ ಉತ್ತಮವಾಗಿ ಸ್ಪಂದಿಸಿ ಸುಮಾರು 13 ಮನೆಗಳಿಗೆ ಅನುದಾನವನ್ನು ತರಲು ಸಹಕರಿಸಿದ ಇವರಿಗೆ ಕೊಡವೂರಿನ ನಾಗರಿಕರ ಪರವಾಗಿ ಗೌರವಿಸುವ ಕಾರ್ಯ ನಡೆಯಿತು.

ನಮ್ಮ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಕಾರ್ತಿಕೇಯ ಭಟ್ ಇವರು ನಮ್ಮ ವಾರ್ಡಿನಲ್ಲಿ ಅನೇಕ ಒಳ್ಳೆಯ ಕಾರ್ಯಕ್ರಮವನ್ನು ಮನೆ – ಮನೆಗೆ ತಲುಪಿಸಲು ಸಂಘ ಸಂಸ್ಥೆಗಳು ಸಹಕಾರದೊಂದಿಗೆ ಪ್ರತಿಯೊಂದು ಪರಿಸರದಲ್ಲಿ ತಾವೇ ಬಂದು ಕೇಂದ್ರ ರಾಜ್ಯ ನಗರಸಭೆಯ ಸವಲತ್ತುಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಾಡಿರುತ್ತಾರೆ.
ಅಧಿಕಾರಿಯ ಉತ್ತಮವಾದ ಕೆಲಸವನ್ನು ಗುರುತಿಸಿ ಗೌರವಿಸುವ ಕಾರ್ಯ ನಮ್ಮದು.ಈ ರೀತಿ ಉತ್ತಮವಾಗಿ ಕೆಲಸವನ್ನು ಮಾಡುವ ಅಧಿಕಾರಿಗಳಿಗೆ ಗೌರವಿಸುವ ಕಾರ್ಯ ಮಾಡಿದ್ದಲ್ಲಿ,ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ಗ್ರಾಮದ ಅಭಿವೃದ್ಧಿಗೆ ಸಹಕರಿಸಲು ಸಾಧ್ಯತೆ ಇದೆ, ಮತ್ತು ಇನ್ನು ಮುಂದಿನ ದಿನಗಳಲ್ಲಿ ಬರುವ ಅಧಿಕಾರಿಗಳು ಇಂತಹ ಕೆಲಸವನ್ನು ಮಾಡಬೇಕು ಎಂದು ನಗರಸಭಾ ಸದಸ್ಯರಾದ ವಿಜಯ್ ಕೊಡವೂರು ತಿಳಿಸಿದರು.

ಈ ಸಂದರ್ಬದಲ್ಲಿ ಹಿರಿಯರಾದ ನಾರಾಯಣ ಬಲ್ಲಾಳ್ ಅಧ್ಯಕ್ಷರು ಸಿ. ಎ ಬ್ಯಾಂಕ್ ಕೊಡವೂರು, ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್, ಮಹಾ ಗಣಪತಿ ಫೈಟಿಂಗ್ ಮಾಲಕರಾದ ಸುರೇಶ್ ಶೇರಿಗಾರ್, ಸದಾನಂದ ಶೇರಿಗಾರ್, ವಿನಯ್ ಮತ್ತಿತರರು ಹಾಜರಿದ್ದರು.

 
 
 
 
 
 
 
 
 
 
 

Leave a Reply