ಹಸಿ ಕಸ ಗೊಬ್ಬರದಿಂದ ಸಾವಯವ ತರಕಾರಿ ತರಕಾರಿ ಮಾಡುವ ಸಂಕಲ್ಪ – ವಿಜಯ್ ಕೊಡವೂರು.

ಕೊಡವೂರು ವಾರ್ಡ್ ನಲ್ಲಿ ಸಾವಯವ ತರಕಾರಿ ಬೆಳೆಸಿಕೊಳ್ಳಬೇಕು,ಅದರಿಂದ ಕೆಮಿಕಲ್ ಆಹಾರದಿಂದ ದೂರವಾಗಿ ಉತ್ತಮ ಆರೋಗ್ಯ ನಿರ್ಮಿಸಲು ಸಾಧ್ಯವಿದೆ ಎಂದು ಉಚಿತ ತರಕಾರಿ ಬೀಜ ವಿತರಣೆ ಮತ್ತು ಹಸಿ ಕಸದಿಂದ ಗೊಬ್ಬರ ಮಾಡಲು ಉಚಿತ ಕಾಂಪೋಸ್ಟ್ ಡ್ರಮ್ ವಿತರಣೆ ಕಾರ್ಯಕ್ರಮವು ಕೊಡವೂರು ವಾರ್ಡಿನ ವೈಷ್ಣವಿ ಲೇಔಟ್ ಪರಿಸರದಲ್ಲಿ ಸಾಹಸ್ ಸಂಸ್ಥೆ ಮತ್ತು ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿ ವತಿಯಿಂದ ನಡೆಯಿತು.

ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡವೂರು ನಗರ ಸಭಾ ಸದಸ್ಯ ವಿಜಯ ಕೊಡವೂರು ಹಸಿಕಸ ಬಿಸಾಡುವ ವಸ್ತು ಅಲ್ಲ ಅದರಿಂದ ಡ್ರಮ್ ಕಾಂಪೋಸ್ಟ್ ಗೊಬ್ಬರವನ್ನು ಮಾಡಿ ಆ ಗೊಬ್ಬರವನ್ನು ಮನೆಯಲ್ಲಿ ಸಾವಯವ ತರಕಾರಿ ಮಾಡಿಕೊಂಡು ನಮ್ಮ ಆರೋಗ್ಯವನ್ನು ಕೆಮಿಕಲ್ ಆಹಾರದಿಂದ ದೂರಮಾಡಲು ಸಾಧ್ಯವಿದೆ, ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟಲು ಸಾಧ್ಯವಿದೆ ಆದ್ದರಿಂದ ಕೊಡವೂರು ವಾರ್ಡ್ ನಲ್ಲಿ ಕ್ಯಾನ್ಸಾರ್ ರೋಗ ಬಾರದಂತೆ ಈ ಒಂದು ಪುಟ್ಟ ಪ್ರಯತ್ನವನ್ನು ಕೊಡವೂರು ನಾಗರಿಕರ ಸಹಯೋಗದಿಂದ ಆಸಕ್ತಿಯಿಂದ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಈ ಸಂಧರ್ಬದಲ್ಲಿ ಸಾಹಸ್ ಸಂಸ್ಥೆಯ ಸೂಪರ್ವೈಸರ್ ಆಗಿರುವ ವಿಶಾಲಾಕ್ಷಿ ದೇವಾಡಿಗ ಇವರು ಸಂಪೂರ್ಣ ಮಾಹಿತಿಯನ್ನು ನೀಡಿದರು.
ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಅಶೋಕ್ ಶೆಟ್ಟಿಗಾರ್ ಸ್ವಾಗತಿಸಿ ವಿನಯ್ ಗರ್ಡೆ ವಂದಿಸಿದರು.

 
 
 
 
 
 
 
 
 
 
 

Leave a Reply