ಉಡುಪಿ ಹಳೆ ಸರ್ಕಾರಿ ಬಸ್ಟಾಂಡ್ ಬಳಿ ವೇಶ್ಯೆಯರ ಹಾವಾಳಿ; ಲಾಠಿ ಬೀಸಿದ ಪೊಲೀಸರು!

ನಗರದ ಹಳೆ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೀದಿ ವೇಶ್ಯೆಯರ ಮೇಲೆ ಪೊಲೀಸರು ಲಾಠಿ ಬೀಸಿದ ಘಟನೆ ನಡೆದಿದೆ.

ಬೀದಿ ವೇಶ್ಯಯರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ‌ ವರ್ತಿಸುತ್ತಾರೆ ಎಂಬ ದೂರಿನ‌ ಆಧಾರದ ಮೇಲೆ ಉಡುಪಿ ನಗರ ಠಾಣೆಯ  ಕೆಲವು ವೇಶ್ಯೆಯರ ಗುಂಪಿನ ಮೇಲೆ ಲಾಠಿ ರುಚಿ ತೋರಿಸಿದ್ದಾರೆ.ಆಗ ಆ ಮಹಿಳೆಯರ ಗುಂಪು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.

ಪೊಲೀಸರು ಲಾಠಿ ಬೀಸುವಾಗ ಒಂದು ಪೆಟ್ಟು ಅಲ್ಲಿ ಇದ್ದ ಒಂದು ಮಂಗಳಮುಖಿಯೊಬ್ಬರಿಗೆ ಬಿದ್ದಿದೆ.ಆ ಮುಂಗಳಮುಖಿಯೊಬ್ಬರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಹಳೆ ಸರ್ಕಾರಿ ಬಸ್ಟಾಂಡ್ ಬಳಿ ಅಲ್ಲಿ ಬೀದಿ ವೇಶ್ಯೆಯರ ಹಾವಾಳಿ ಹೆಚ್ಚಾಗಿದೆ, ಮತ್ತು ವೇಶ್ಯಾವಾಟಿಕೆ ನಿರಂತರ ನಡೆಯುತ್ತಿದೆ. ಅಲ್ಲಿಯ ಪಕ್ಕದ ಲಾಡ್ಜ್ ಗಳಲ್ಲಿ ಕೂಡ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪ ಕೇಳಿ ಬರುತ್ತಿದೆ.ಈ ಬೀದಿ ವೇಶ್ಯಯರ ಅಸಭ್ಯ ವರ್ತನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ಇದರ ಬಗ್ಗೆ ನಗರಠಾಣೆಯ ದಕ್ಷ ಹಾಗೂ ಖಡಕ್ ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 
 
 
 
 
 
 
 
 
 
 

Leave a Reply