ಉಡುಪಿ : ಬೈಲಕೆರೆ ನಿವಾಸಿ ವನಿತಾ ರಾಡ್ರಿಗಸ್ ಸಾವಿನ ತನಿಖೆ ನಡೆಸಲು ಮನವಿ

ಉಡುಪಿ : ಬೈಲಕೆರೆ ನಿವಾಸಿ ವನಿತಾ ರಾಡ್ರಿಗಸ್ ಡಿ.28 ರಂದು ಹಟ್ಟಾತ್ ಅನಾರೋಗ್ಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಡಿ.31 2021ರಂದು ಮೃತರಾಗಿರುತ್ತಾರೆ. 

ವನಿತಾ ಕೋವಿಡ್ ಲಸಿಕೆ ಪಡೆದ ಹಿನ್ನಲೆಯಲ್ಲಿ ಮೃತರಾಗಿರುತ್ತಾರೆ ಎಂದು ಸುಳ್ಳು ಪ್ರಚಾರ ಮಾಡ ಹೊರಟ ಆಕೆಯ ಗಂಡ ಹಲವಾರು ಬಾರಿ ಹಲ್ಲೆ ನಡೆಸಿ ಕೆಲವು ದಿನಗಳ ಹಿಂದೆಯೂ ಇದರ ಬಗ್ಗೆ ಪೋಲಿಸ್ ಠಾಣೆಗೂ ಹೋಗಿರುತ್ತಾರೆ. 

ಸದ್ರಿ ಸಾವಿನ ಬಗ್ಗೆ ಹಲವಾರು ಸಂಶಯಗಳಿದ್ದು ಇದರ ಬಗ್ಗೆ ಸಮಗ್ರ ತನಿಖೆ ನಡೆಸಲು ಬೈಲಕೆರೆ ಮಹಿಳೆಯರು ಮಲ್ಪೆ ಠಾಣೆಗೆ ಮನವಿ ಮಾಡಿರುತ್ತಾರೆ. ಬೈಲಕೆರೆ ನಿವಾಸಿಗಳು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಬೈಲಕೆರೆ ಯುವಕ ಮಂಡಲ ಮುಖಾಂತರ ಮಾಜಿ ತಾ.ಪಂ ಸದಸ್ಯ ಶರತ್ ಕುಮಾರ್ ಬೈಲಕೆರೆ ಯವರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು ಆಯೋಗವು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಲ್ಲಿ ತಿಖೆಗೆ ಆದೇಶಿಸಿರುತ್ತಾರೆ. ಬೈಲಕೆರೆಯ ಮಹಿಳೆಯ ಪರವಾಗಿ ಮಹಿಳೆಯರಿಂದ ನಡೆಯುತ್ತಿರುವ ಹೋರಾಟಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಬೆಂಬಲ ನೀಡಿದ್ದು ತನಿಖೆಗೆ ಆದೇಶಿಸಿರುತ್ತಾರೆ. 

ಇಂದು ನಡೆದ ಮಲ್ಪೆ ಠಾಣಾಧಿಕಾರಿಗಳಿಗೆ ಮನವಿ ನೀಡುವ ಕಾರ್ಯಕ್ರಮದಲ್ಲಿ ಬೈಲಕೆರೆಯ ಮಹಿಳೆಯರೊಂದಿಗೆ ತೆಂಕನಿಡಿಯೂರು ಪಂ. ಅಧ್ಯಕ್ಷೆ ಗಾಯತ್ರಿ , ಉಪಾಧ್ಯಕ್ಷ ಅರುಣ್ ಜತ್ತನ್ನ ಹಾಗೂ ಸದಸ್ಯರುಗಳು , ತೆಂಕನಿಡಿಯೂರು ಸಂಜೀವಿನಿ ಸಂಘದ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಹಾಗೂ ಸಂಘದ ಸದಸ್ಯರು ಬೈಲಕೆರೆ ಅಂಗನವಾಡಿ ಶಿಕ್ಷಕಿ ಸುನೀತ ಹಾಗೂ ಆಶಾ ಕಾರ್ಯಕರ್ತೆಯರು ಹಾಗೂ ಬೈಲಕೆರೆ ಸಮಸ್ತ ನಾಗರೀಕರು ಮಹಿಳೆಯರ ಹೋರಾಟಕ್ಕೆ ಬೆಂಬಲ ನೀಡಿರುತ್ತಾರೆ.

 
 
 
 
 
 
 
 
 
 
 

Leave a Reply