ತೆಂಕನಿಡಿಯೂರು ಕಾಲೇಜು :ಸ್ಟಾಕ್​ ​ಮಾರ್ಕೆಟ್ ಉಪನ್ಯಾಸ

ಉಡುಪಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ​ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು​ ಹಾಗೂ ಶೈನ್ ಪ್ರೊಜೆಕ್ಟ್ ಸಹಯೋಗದೊಂದಿಗೆ ಸ್ಟಾಕ್ ಮಾರ್ಕೆಟ್ ಅರಿವು ವಿಶೇಷ ಉಪನ್ಯಾಸವನ್ನು​ ಹಮ್ಮಿಕೊಳ್ಳಲಾಯಿತು. 
 
ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಶೈನ್​ ​ಸಂಸ್ಥೆಯ ನಿರ್ದೇಶಕರು ಹಾಗೂ ಸ್ಟಾಕ್‌ಮಾರ್ಕೆಟ್ ಅನಾಲಿಸ್ಟ್​ ಶ್ರೀ ಶ್ರೀಹರ್ಷ ವಿಶೇಷ ಉಪನ್ಯಾಸ ನೀಡಿದರು. ಸ್ಟಾಕ್ ಮಾರ್ಕೆಟ್‌ನ ವಿವಿಧ ಆಯಾಮಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ​ ​ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು.
 
ಕಾಲೇಜಿನ​ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ​  ವಹಿಸಿದ್ದರು. ವಾಣಿಜ್ಯ ಶಾಸ್ರ  ಸ್ನಾತಕೋತ್ತರ ಪದವಿ ವಿಭಾಗದ​ ಸಂಯೋಜಕ ಪ್ರೊ. ತಿಮ್ಮಣ್ಣ ಜಿ. ಭಟ್ ಹಾಗೂ ಪದವಿವಿಭಾಗದ ಮುಖ್ಯಸ್ಥರಾದ ಡಾ. ಉದಯ ಶೆಟ್ಟಿ ಕೆ. ಈ​ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಶ್ರೀಮತಿ ಮೇವಿ​ ​ಮಿರಾಂದ ವಂದಿಸಿದರು.
 
 
 
 
 
 
 
 
 
 
 

Leave a Reply