ರೋಟರಿ ಉಡುಪಿಯಿಂದ ವನಮಹೋತ್ಸವ

ಉಡುಪಿ:ರೋಟರಿ ಉಡುಪಿ ಮತ್ತು ಇಂದಿರಾ ಶಿವ ರಾವ್ ಪೋಲಿಟೆಕ್ನಿಕ್ ಮೂಡುಪೆರಂಪಳ್ಳಿ, ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಉಡುಪಿ ಕೃಷ್ಣಾಪುರ ಮಠದ ಪರಮ ಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಸಂಸ್ಥೆಯ ಆವರಣದಲ್ಲಿ ಉತ್ತಮ ತಳಿಯ ಗೇರು ಸಸಿಯೊಂದನ್ನು ನೆಡುವ ಮೂಲಕ ಶುಭಚಾಲನೆಗೈದರು.ರೋಟರಿ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಕೂಡ ಒಟ್ಟು 60 ಸಸಿಗಳನ್ನು ನೆಡುವ ಕಾರ್ಯದಲ್ಲಿ ಭಾಗವಹಿಸಿದರು.

ನಂತರ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪರಮ ಪೂಜ್ಯ ಸ್ವಾಮೀಜಿಯವರು, ‌ಸಂಸ್ಥೆಯ ಸಂಚಾಲಕರಾದ ಯು.ಕೆ. ರಾಘವೇಂದ್ರ ರಾಯರು, ಪ್ರಾಂಶುಪಾಲೆ ಪವಿತ್ರ ಡಿ., ರೋಟರಿ ಉಡುಪಿಯ ಅಧ್ಯಕ್ಷ ರೊ. ಹೇಮಂತ್ ಯು. ಕಾಂತ್, ಕಾರ್ಯದರ್ಶಿ ರೊ. ಜೆ. ಜಿ. ಪ್ರಭು, Environment Mission ಕೋರ್ಡಿನೇಟರ್ ರೊ. ರಂಜಿತಾ ಶೇಟ್ ಉಪಸ್ಥಿತರಿದ್ದರು. ರೋಟರಿ ವತಿಯಿಂದ ಸ್ವಾಮೀಜಿಯವರಿಗೆ ಫಲ ಪುಷ್ಪಗಳನ್ನು ನೀಡಿ, ಗೌರವಿಸಲಾಯಿತು. 

ಸಂಸ್ಥೆಯ ಶ್ರೀನಿಧಿ ಪ್ರಾರ್ಥನೆಗೈದರು. ಪ್ರಾಂಶುಪಾಲೆ ಪವಿತ್ರ ಡಿ. ಸ್ವಾಗತಿಸಿದರು. ರೋಟರಿ ಉಡುಪಿಯ ಅಧ್ಯಕ್ಷ ರೊ. ಹೇಮಂತ್. ಯು. ಕಾಂತ್ ಪ್ರಸ್ತಾವನೆಗೈದರು. ರಾಘವೇಂದ್ರ ರಾಯರು ಸಂದರ್ಭೋಚಿತವಾಗಿ ಮಾತನಾಡಿದರು. ಪರಮಪೂಜ್ಯ ಸ್ವಾಮೀಜಿಯವರಿಂದ ಶುಭಾಶೀರ್ವಚನ ನೆರವೇರಿತು. ಭಾಗ್ಯಶ್ರೀ ವಂದಿಸಿ,ರೊ. ಬಿ.ವಿ. ಲಕ್ಷ್ಮೀ ನಾರಾಯಣ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply