ಕಲ್ಯಾಣಪುರ ಮಿಲಾಗ್ರಿಸ್ ಚರ್ಚ್ ನ ಎದುರು ತಂತಿ ಕಂಬದಲ್ಲಿ “ತಾಂಟ್ರೆ ಬಾ ತಾಂಟ್” ಎಂಬ ಫಲಕ ನೇತಾಡುತ್ತಿದೆ. ಅದೂ ಕೂಡಾ ಮೆಸ್ಕಾಂ ಎಂದು ಕೆಳಗೆ ಬರೆಯಲಾಗಿದೆ.
ಮಂಗಳೂರಿನಲ್ಲಿ ಈ ಹಿಂದೆ ನಡೆದ ಭಾಷಣದ ಈ ತುಣುಕು ಎಲ್ಲಡೆ ವೈರಲ್ ಆಗಿದೆ. ಈಗ ಉಡುಪಿ ಸರದಿ. ಶಾಲಾ ಕಾಲೇಜು ಮಕ್ಕಳಂತು ನಾ ಮುಂದು, ತಾ ಮುಂದು ಎಂದು ಸ್ಪರ್ಧೆ ಯಲ್ಲಿ ಈ ಜನಾಕರ್ಷಣೆಯ ಫಲಕದ ಮೊಬೈಲ್ ಛಾಯಾಚಿತ್ರ ತೆಗೆಯುತ್ತಿರುವುದು ಕಂಡು ಬರುತ್ತಿದೆ.
ಮೆಸ್ಕಾಂನವರು ಈ ರೀತಿ ಬ್ಯಾನೆರ್ ಅಳವಡಿ ಸಲು ಸಾಧ್ಯವಿದೆಯೋ ಅಥವಾ ಯಾರಾದರೂ ಕಿಡಿಗೇಡಿಗಳು ಹಾಕಿರಬಹುದೊ ಎಂದು ಸ್ಥಳೀಯರು ಮಾತನಾಡಿ ಕೊಳ್ಳುತ್ತಿದ್ದಾರೆ.