ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ

ಮಣಿಪಾಲ: ಮಾ.11ರ ವಿಶ್ವ ಮೂತ್ರಪಿಂಡ ದಿನ 2021 ರಂದು ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವರ್ಷದ ದ್ಯೇಯ ವಾಕ್ಯ “ಮೂತ್ರಪಿಂಡ ಕಾಯಿಲೆಯ ಜೊತೆಗೆ ಉತ್ತಮ ಜೀವನ”. 

 

ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಮತ್ತು ಘಟಕ ಮುಖ್ಯಸ್ಥರಾದ ಡಾ.ಪುಷ್ಪಾ ಜಿ ಕಿಣಿ ಇವರು ಈ ಹೊಸ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಈ ಎಂಟು ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಧನಾತ್ಮಕ ಚಿಂತನೆ, ನಿಯಮಿತವಾಗಿ ವೈದ್ಯರನ್ನು ಭೇಟಿ ಮತ್ತು ಕಿಡ್ನಿ ಕಾರ್ಯವನ್ನು ಪರೀಕ್ಷಿಸುವುದು, ಧೂಮಪಾನದಿಂದ ದೂರ ಇರುವುದು, ಪೌಷ್ಠಿಕಾಂಶವುಳ್ಳ ಪಥ್ಯಾಹಾರ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ಅವಶ್ಯವಿದ್ದಷ್ಟು ನೀರು ಕುಡಿಯುವುದು, ವೈದ್ಯರ ಸಲಹೆ ಪಡಯದೇ ಮಾತ್ರೆ ತೆಗೆದುಕೊಳ್ಳಬಾರದು ಎಂದರು.  

 

 ಮೂತ್ರಪಿಂಡ ಕಾಯಿಲೆ ಬಗ್ಗೆ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಎಂಸಿ ಡೀನ್ ಡಾ.ಶರತ್ ಕೆ ರಾವ್ ಅವರು, “ ಪ್ರತೀ ವರ್ಷ ಮಾರ್ಚ್ ತಿಂಗಳ ಎರಡನೇ ಗುರುವಾರವನ್ನು ಮೂತ್ರ ಪಿಂಡ ದಿನವನ್ನಾಗಿ ಆಚರಿಸಲಾಗುತ್ತದೆ. ನಮ್ಮ ಜೀವನ ಶೈಲಿಯನ್ನು ನೋಡಿದರೆ ಎರಡು ಮುಖ್ಯ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ. ಈ ಕಾಯಿಲೆಗಳು ಕಿಡ್ನಿ ಮೇಲೆ ಪರಿಣಾಮ ಬೀರುತ್ತಿವೆ, ಆದರೆ ಇದರ ಬಗ್ಗೆ ಜಾಗೃತಿ ವಹಿಸಿದರೆ ಸುಮಾರು 50% ರಷ್ಟು ಕಿಡ್ನಿ ಕಾಯಿಲೆಯನ್ನು ಕಡಿಮೆ ಮಾಡಬಹುದು. ಆದರೆ ಜನರಿಗೆ ಇದರ ಬಗ್ಗೆ ಅರಿವು ಇಲ್ಲ . ಇತ್ತೀಚಿನ ಸಂಶೋಧನೆ ಪ್ರಕಾರ ಕೈಗಾರಿಕಾ ತ್ಯಾಜ್ಯದಿಂದ ಬೆಳೆದ ಆಹಾರ ಪದಾರ್ಥ ವು ಕೂಡ ಮೂತ್ರಪಿಂಡ ಕಾಯಿಲೆಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಜಾಗೃತಿ ಬೇಕಾಗಿದೆ ಮತ್ತು ವರ್ಷಕೊಮ್ಮೆಯಾದರು ಕಿಡ್ನಿಯನ್ನು ಪರೀಕ್ಸಿಸಿಕೊಳ್ಳಬೇಕು” ಎಂದರು .

 

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಿ.ಜಿ.ಮುತ್ತನ, ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮೂತ್ರಪಿಂಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಂಕರ್ ಪ್ರಸಾದ್ ಎನ್, ಮಕ್ಕಳ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಲೆಸ್ಲಿಈ ಲೀವಿಸ್ ಉಪಸ್ಥಿತರಿದ್ದರು.

 

ಡಾ.ಮಂಜುನಾಥ್, ಪ್ರಾಧ್ಯಾಪಕ ಮತ್ತು ಮುಖ್ಯಸ್ಥ, ಮೂತ್ರಪಿಂಡ ವಿಭಾಗ, ಫಾಧರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು, ಮಣಿಪಾಲದ ಮೂತ್ರಪಿಂಡ ವಿಭಾಗದ ಡಾ.ಶಂಕರ್ ಪ್ರಸಾದ್, ಡಾ.ರವೀಂದ್ರ ಪ್ರಭು ಎ, ಮತ್ತು ಡಾ. ಧರ್ಶನ್ ರಂಗಸ್ವಾಮಿ, ಪ್ರಶಾಮಕ ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥರಾದ ಡಾ.ನವೀನ್ ಎಸ್ ಸಲೀನ್ಸ್ ಅವರು ಮೂತ್ರಪಿಂಡ ಕಾಯಿಲೆಯ ಬಗ್ಗೆ ರೋಗಿಗಳಿಗೆ ಮೂತ್ರಪಿಂಡ ರೋಗ ಮತ್ತು ಆರೈಕೆ ಕುರಿತು ಅರಿವು ಮತ್ತು ಜಾಗೃತಿ ಭಾಷಣ ನೀಡಿದರು. ಡಾ. ಶಂಕರ್ ಪ್ರಸಾದ್ ಅವರು ಸ್ವಾಗತಿಸಿದರು ಮತ್ತು ಡಾ. ಲೆಸ್ಲಿ ಲೀವಿಸ್ ಅವರು ವಂದಿಸಿದರು. ಡಾ ಧರ್ಶನ್ ರಂಗಸ್ವಾಮಿ ಮಕ್ಕಳ ಮೂತ್ರಪಿಂಡ ವಿಭಾಗದ ಅವಲೋಕನ ನೀಡಿದರು.

ಈ ಹೊಸ ವಿಭಾಗವನ್ನು ಮಕ್ಕಳ ಮೂತ್ರಪಿಂಡ ತಜ್ಞರಾದ ಡಾ. ಧರ್ಶನ್ ರಂಗಸ್ವಾಮಿಯವರು ಮುನ್ನಡೆಸಲಿದ್ದಾರೆ. ಪ್ರತಿ ಸೋಮವಾರ ಮತ್ತು ಶುಕ್ರವಾರದಂದು ಸಮಾಲೋಚನೆಗಾಗಿ ಲಭ್ಯವಿರುತ್ತಾರೆ ಮತ್ತು ಹೊಸ ವಿಭಾಗದ ಆರಂಭದ ಪ್ರಯುಕ್ತ 31ನೇ ಮಾರ್ಚ್ 2021 ರವರೆಗೆ ಉಚಿತ ಸಮಾಲೋಚನೆ ಮತ್ತು ಪ್ರಯೋಗಾಲಯ ಶುಲ್ಕದಲ್ಲಿ 30% ರಿಯಾಯಿತಿ ನೀಡಲಾಗುವುದು.

 
 
 
 
 
 
 
 
 
 
 

Leave a Reply