ಕೋಟೆಕಾರಿನ ಸರ್ವಿಸ್ ರಸ್ತೆಯಲ್ಲಿ ನಮಾಜ್ ಮಾಡಿದ್ದು ಪ್ರದರ್ಶನಕ್ಕಾ? ಡಾ.ಭರತ್ ಶೆಟ್ಟಿ ವೈ

ಸುರತ್ಕಲ್, ಮೇ 3:ಕೋಟೆಕಾರ್‌ ಮಸೀದಿಯ ಒಳಭಾಗದಲ್ಲಿ ಸಾಕಷ್ಟು ಜಾಗವಿದ್ದರೂ ಹೆದ್ದಾರಿ ಬದಿಯಲ್ಲಿನ ಸರ್ವಿಸ್ ರಸ್ತೆಯಲ್ಲಿನಮಾಜ್ ಮಾಡಿದ್ದು ಪ್ರದರ್ಶನಕ್ಕಾ ಆಥವಾ ಮತ ಪ್ರಚಾರಕ್ಕಾ ವಾಹನ ಸಂಚಾರಕ್ಕೆ ತಡೆ ಒಡ್ಡಿ ಯಾವತ್ತೂ ನಮ್ಮ ನಮ್ಮ ಸಂಪ್ರದಾಯಗಳ ಆಚರಣೆ ಶೋಭೆ ತರುವುದಿಲ್ಲ ಎಂದು ಶಾಸಕ ಡಾ.ಭರತ್‌ ಶೆಟ್ಟಿ ವೈ ಹೇಳಿದ್ದಾರೆ.

ಯಾವುದೇ ಧರ್ಮದ ಅಥವಾ ಮತದ ಹಬ್ಬದ ಆಚರಣೆ ಸಾರ್ವಜನಿಕ ಜೀವನಕ್ಕೆ ಸಮಸ್ಯೆ ಆಗುವಂತೆ ಇರಬಾರದು. ಕನಿಷ್ಠಮೈಕ್ ಶಬ್ದ ವ್ಯಾಪ್ತಿಯೊಳಗೆ ಪ್ರಾರ್ಥನೆ ಮತ್ತಿತರ ಮತ, ಧರ್ಮದ ಆಚರಣೆ ಸೂಕ್ತ.ಈ ಬಗ್ಗೆ ಆಯಾ ಮತ, ಧರ್ಮದ ಧರ್ಮಗುರುಗಳು ನೇತೃತ್ವ ವಹಿಸಿ ಶಾಂತಿಯುತವಾಗಿ ಆಚರಣೆಗೆ ಆಗುವಂತೆ ನೋಡಿಕೊಳ್ಳಬೇಕಿದೆ ಎಂದು ಶಾಸಕ ಡಾ.ಭರತ್‌ ಶೆಟ್ಟಿ ಹೇಳಿದ್ದಾರೆ.

 
 
 
 
 
 
 
 
 
 
 

Leave a Reply