ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ, ವಿಶೇಷ ಮಕ್ಕಳ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆ

ಸುಮೇಧಾ ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ, ವಿಶೇಷಮಕ್ಕಳ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಭೆಯ ಅಧ್ಯಕ್ಷತೆ ವಹಿಸಿದ ಸಂಸ್ಥಾಪಕರಾದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥಸ್ವಾಮೀಜಿ ಯವರು ಇಂತಹ ಸಂಸ್ಥೆ ಯ ಸ್ಥಾಪನೆಯ ಉದ್ಧೇಶ ವನ್ನು ವಿವರಿಸಿ ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು. ಸಂಸ್ಥೆಯ ಮಾರ್ಗದರ್ಶಕರಾದ ಡಾ | ಪಿ.ವಿ. ಭಂಡಾರಿಯವರು ಹೆತ್ತವರಿಗೆ ಅನೇಕ ಸೂಚನೆಗಳನ್ನು ನೀಡಿ ಅವರ ಸಮಸ್ಯೆ ಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಲಹೆಗಳನ್ನು ನೀಡಿದರು. ನಿವೃತ್ತ ವಿಕಲಚೇತನ ವಿಭಾಗದ ಅಧಿಕಾರಿ ಶ್ರೀ ನಿರಂಜನ ಭಟ್ ರವರು ಸರಕಾರದ ಸವಲತ್ತುಗಳು ಕುರಿತು ಪೋಷಕರಿಗೆ ವಿಶೇಷ ಮಾಹಿತಿ ನೀಡಿದರು..ಸಭೆಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಜನಾರ್ಧನ್ ಭಟ್ , ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯರು, ಆಡಳಿತ ಮಂಡಳಿಯ ಸದಸ್ಯರಾದ ಬೈಕಾಡಿ ಸುಪ್ರಸಾದ ಶೆಟ್ಟಿ ಚಂದ್ರಶೇಖರ್ ಆಚಾರ್ಯ ರವರು ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿಯಾದ ಸುಮನ ರವರು ಧನ್ಯವಾದ ಸಮರ್ಪಿಸಿದರು

 
 
 
 
 
 
 
 
 
 
 

Leave a Reply