ನಾನೇ ಮದುವೆ ಗಂಡು ಮುಹೂರ್ತಕ್ಕೆ ಟೈಮ್ ಆಗ್ತಿದೆ ಬಿಟ್ಟುಬಿಡಿ ಸರ್ ಎಂದು ಪೋಲಿಸರಲ್ಲಿ ವಿನಂತಿಸಿದ ಮದುಮಗ!!

ಬೆಂಗಳೂರು : ವ್ಯಕ್ತಿಯೋರ್ವ, “ಮುಹೂರ್ತ ಟೈಮ್ ಆಗುತ್ತಿದೆ‌, ದಯವಿಟ್ಟು ಬೇಗ ಬಿಡಿ ಸರ್ ನಾನೇ ಮಧುಮಗ” ಎಂದು ಸಂಚಾರಿ ಪೊಲೀಸರಿಗೆ ಮನವಿ ಮಾಡಿದ ಘಟನೆ ನಡೆಯಿತು.

 ಮಾಗಡಿ ರೋಡ್ ಟ್ರಾಫಿಕ್ ಪೊಲೀಸರು ಕರ್ಫ್ಯೂ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ನಡೆಸುವಾಗ ಬೈಕ್ ನಲ್ಲಿ‌ ಮದುಮಗ ಹಾಗೂ ಆತನ ತಂದೆ ಬಂದಿದ್ದಾರೆ.ಅವರನ್ನು ನಿಲ್ಲಿಸಿದ ಪೊಲೀಸರು ಸುಖಾಸುಮ್ಮನೆ ಓಡಾಡುತ್ತಿರುವುದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಅದಕ್ಕೆ “ಸರ್ ನಾನು ಮದುವೆ ಗಂಡು ಮದುವೆಯಾಗಲು ಹೋಗುತ್ತಿರುವುದಾಗಿ ಉತ್ತರಿಸಿದ್ದಾರೆ.‌ ಇದನ್ನು ನಂಬದ ಪೊಲೀಸರು ಮದುವೆ ಆಹ್ವಾನ ಪತ್ರಿಕೆ ನೀಡುವಂತೆ ಪ್ರಶ್ನಿಸಿದ್ದಾರೆ. ಕಾರ್ಡ್ ತೋರಿಸಿ ಹೆಸರು ಖಾತ್ರಿ ಪಡಿಸಿಕೊಂಡ ಬಳಿಕವಷ್ಟೇ ನಂಬಿದ್ದಾರೆ‌. ಕೊರೊನಾದಿಂದ ಮದುವೆ ಮಂಟಪದಲ್ಲಿ ಮದುವೆಯಾಗಲು ಸಾಧ್ಯವಾಗಿಲ್ಲ, ದೇವಸ್ಥಾನದಲ್ಲಿ ವಿವಾಹವಾಗುತ್ತಿದ್ದೇನೆ‌. ಮೂಹುರ್ತಕ್ಕೆ ಟೈಮ್ ಆಗುತ್ತಿರುವ ಹಿನ್ನೆಲೆ ಬೈಕ್ ನಲ್ಲಿ ಬಂದಿರುವೆ” ಎಂದು ಪೊಲೀಸರ ಮುಂದೆ ತಂದೆ-ಮಗ ಮನವಿ ಮಾಡಿದ್ದಾರೆ ಇದನ್ನು ಪರೀಶೀಲಸಿದ ಪೊಲೀಸರು ಮದುವೆ ಗಂಡಿಗೆ ಶುಭಾಶಯ ಹೇಳಿ ಕಳುಹಿಸಿ ಕೊಟ್ಟಿದ್ದಾರೆ.

 
 
 
 
 
 
 
 
 
 
 

Leave a Reply