ಅಶೋಕ್ ಕುಮಾರ್ ಉದ್ದಿನಹಿತ್ಲು ಅವರಿಗೆ ಸಂತಾಪ ಸಭೆ

ಕೊಡವೂರು: ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ , ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಗೆಳೆಯರ ಬಳಗ ಕೊಡವೂರು ಇವರ ವತಿಯಿಂದ ಇತ್ತೀಚೆಗೆ ನಿಧನ ಹೊಂದಿದ ಸಮಾಜಸೇವಕ,ಕ್ರೀಡಾಪಟು ಅಶೋಕ್ ಕುಮಾರ್ ಉದ್ದಿನಹಿತ್ಲು ಇವರ ಸಂತಾಪ ಸಭೆ ಇಂದು ಕೊಡವೂರು ಯುವಕ ಸಂಘದ ಕಾರ್ಯಾಲಯದಲ್ಲಿ ಜರಗಿತು.

ಹಿರಿಯ ಸಾಮಾಜಿಕ ಮುಂದಾಳು ಅಶೋಕ್ ಕುಮಾರ್ ಕೊಡವೂರು ಅವರು ದೀಪ ಬೆಳಗಿಸಿ ಚಾಲನೆ ನೀಡಿದರು‌. ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು ನುಡಿ ನಮನ ಸಲ್ಲಿಸಿ ನೇರ ನಡೆ ನುಡಿ,ಶುದ್ದ ಅಂತಃಕರಣದಿಂದ ಸ್ವಾಭಿಮಾನದ ಬದುಕನ್ನು ನಡೆಸಿ, ಹಲವಾರು ಯುವಕರಿಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಪ್ರೇರಣೆ ನೀಡಿ, ಸ್ಥಳೀಯ ಹಳೆ ವಿದ್ಯಾರ್ಥಿ ಸಂಘ , ಯುವಕ ಸಂಘದ ಬೆನ್ನೆಲುಬು ಆಗಿದ್ದವರು ಅಶೋಕ್ ಕುಮಾರ್ ಉದ್ದಿನಹಿತ್ಲು ಎಂದರು.ಮೌನ ಪ್ರಾರ್ಥನೆಯ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು.ಕಂಗಣಬೆಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್,ಸುಮನಸಾ ಕೊಡವೂರು ಇದರ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಮಹಿಳಾ ಮುಂದಾಳು ಸುಧಾ.ಎನ್ . ಶೆಟ್ಟಿ, ನವಸುಮ ರಂಗ ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕೊಡವೂರು ಮ್ರತರ ಗುಣಗಾನ ಮಾಡಿದರು.

ಸ್ಥಳೀಯ ಸಂಘ ಸಂಸ್ಥೆಗಳ ಪದಾಧಿಕಾರಿಗಳಾದ ರತ್ನಾಕರ ಅಮೀನ್,ಕ್ರಷ್ಣ ದೇವಾಡಿಗ, ರಮೇಶ್ ಅಮೀನ್,ವಾದಿರಾಜ್ ಉದ್ದಿನಹಿತ್ಲು, ಸುರೇಶ್ ತೊಟ್ಟಂ, ರಾಜೇಶ್ ಕೊಡವೂರು,ಯಶೋಧರ ಸಾಲ್ಯಾನ್,ಅರುಣ್ ಕುಮಾರ್,ಅಜಿತ್ ಕುಮಾರ್, ದಾಮೋದರ ಕುಡಾರ್ ತೋಟ, ಶೇಖರ ಮಾಬ್ಯಾನ್,ಭಾಸ್ಕರ್ ಮಲ್ಪೆ, ಮೆಲ್ವಿನ್ ಮೆಂಡೋನ್ಸ , ಸುಭಾಷ್ ಕೊಳ,ಭರತ್ ಚಂದರ್, ಅಶೋಕ್ ಪೂಜಾರಿ ನಾಲ್ಕರೆ, ರೂಪಸ್ ಸಿಕ್ವೇರಾ,ರಮೇಶ್ ಕುಡಾರ್ ತೋಟ ಉಪಸ್ಥಿತರಿದ್ದರು.ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 

Leave a Reply