ಬೆಂಗಳೂರು : ಸಿಎಂ ಸ್ಥಾನ ತ್ಯಜಿಸುವ ಗಡಿಬಿಡಿಯಲ್ಲಿರುವ ಯಡಿಯೂರಪ್ಪ ನಿನ್ನೆ ಸಚಿವ ಸಂಪುಟ ಸಭೆಯ ನಡೆಸಿದ್ದರು. ಇಂದು ಬೆಂಗಳೂರು ಮಹಾನಗರದ ಕಾಮಗಾರಿಗಳನ್ನು ಖುದ್ದು ತಾವೇ ಪರಿಶೀಲನೆ ಮಾಡಿದರು.
ಬಳಿಕ ನಿರಾಳವಾಗಿ ವುಡ್ಲ್ಯಾಂಡ್ ಹೋಟೆಲ್ ಗೆ ತೆರಳಿ ಉಡುಪಿ ಸ್ಪೆಷಲ್ ಬಿಸಿ ಬಿಸಿ ಕಡಬು ,ವಡೆ, ಮಸಾಲೆ ದೋಸೆ ಸವಿದು ಟೀ ಕುಡಿದರು.ಸಚಿವ ಅಶೋಕ್ ಮುಖ್ಯಮಂತ್ರಿಗಳ ಜೊತೆಯಿದ್ದರು.ವುಡ್ ಲ್ಯಾಂಡ್ಸ್ ಹೋಟೆಲ್ ಮಾಲೀಕ ವಾಸುದೇವ ರಾವ್, ಪುತ್ರ ಪ್ರಾಣೇಶರಾವ್ ಹಾಗೂ ಮೊಮ್ಮಕ್ಕಳು ಕೃಷ್ಣ ಮತ್ತು ವಾಸುದೇವರೊಂದಿಗೆ ಮುಖ್ಯಮಂತ್ರಿಗಳು ಆತ್ಮೀಯವಾಗಿ ಮಾತನಾಡಿದರು.