ಎನ್.ಗುರುರಾಜ್ ರವರಿಗೆ ಪತ್ರಿಕಾ ದಿನದ ಗೌರವ

ಉಡುಪಿ :- ಪತ್ರಕತ೯ರ ವೇದಿಕೆ ಬೆಂಗಳೂರು ಉಡುಪಿ ಜಿಲ್ಲಾ ಘಟಕದ ವತಿಯಿಂದ ನಿವೃತ್ತ ಪತ್ರಕತ೯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಎನ್.ಗುರುರಾಜ್ ರವರಿಗೆ ಪತ್ರಿಕಾ ದಿನದ ಗೌರವ ಕಾಯ೯ಕ್ರಮ ಅವರ ಸ್ವಗ್ರಹದಲ್ಲಿ ಜು.23ರಂದು ನಡೆಯಿತು.

ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿ ಕ.ಸಾ.ಪ ಮಾಜಿ ರಾಜ್ಯ ಅಧ್ಯಕ್ಷ ಧಮ೯ದಶಿ೯ ಹರಿಕೃಷ್ಣ ಪುನರೂರು ಮಾತನಾಡಿ, ಗುರುರಾಜ್ ರವರು ಹಿರಿಯ ಪತ್ರಕತ೯ರಾಗಿ, ಸಾಹಿತಿಯಾಗಿ ದೀಘ೯ ಕಾಲ ಕೆಲಸ ಮಾಡಿರುವವರು ಯಾವುದೇ ಹಮ್ಮ ಬಿಮ್ಮು ಇಲ್ಲದೆ ಸರಳ ಬದುಕಿನೊಂದಿಗೆ ಸಾವಿರಾರು ಪತ್ರಕತ೯ರನ್ನು ಬೆಳೆಸಿದ್ದಾರೆ. ಒಬ್ಬ ವ್ಯಕ್ತಿ ಶಕ್ತಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಗೌರವ ಸ್ಟೀಕರಿಸಿ ಮಾತನಾಡಿದ ಎನ್.ಗುರುರಾಜ್ ರವರು ಪತ್ರಿಕೋದ್ಯಮ ಹಲವಾರು ಮಜಲುಗಳನ್ನು ದಾಟಿ ಬಂದಿದೆ ಹಲವಾರು ಸುದ್ದಿ ಮಾಧ್ಯಮಗಳು ಬಂದರೂ ಅದರ ಪ್ರಸಿದ್ಧಿಗೆ ಕೊರತೆಯಾಗಿಲ್ಲ ಯುವ ಪತ್ರಕತ೯ರು ಹಲವಾರು ಸಾಧನೆ ಮಾಡುತ್ತಿರುವುದು ಅಭಿನಂದನೀಯ ಎಂದರು.

ಕಾಯ೯ಕ್ರಮದಲ್ಲಿ ಹಿರಿಯ ಪತ್ರಕತ೯ ವಸಂತರಾಜ್, ಹಿರಿಯ ಸಮಾಜ ಸೇವಕ ವಿಶ್ವನಾಥ್ ಶೆಣ್ಯ್, ಖ್ಯಾತ ಕಲಾವಿದ ಪಿ.ಎನ್ ಆಚಾಯ೯, ನರಸಿಂಹ ಪಂಚನಬೆಟ್ಟು, ಸಂತೋಷ್ ಜೈನ್, ನರಸಿಂಹ ಮೂತಿ೯ ಮುಂತಾದವರಿದ್ದರು.

ಕಾಯ೯ಕ್ರಮ ಸಂಘಟಕ ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಪತ್ರಕತ೯ರಾದ ಪದ್ಮಾಕರ ಭಟ್ ಈದು ಪ್ರಸ್ಥಾವನೆಗೈದರು. ದೇವರಾಯ ಪ್ರಭು ವಂದಿಸಿದರು. ರಾಘವೇಂದ್ರ ಪ್ರಭು, ಕವಾ೯ಲು ನಿರೂಪಿಸಿದರು.

 
 
 
 
 
 
 
 
 
 
 

Leave a Reply