ಶ೦ಕರಪುರದಲ್ಲಿ ಉಚಿತ ನೇತ್ರ ತಪಾಸಣಾಶಿಬಿರ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ರೋಟರಿ ಶ೦ಕರಪುರ ಹಾಗೂ ಶ೦ಕರಪುರ ರೋಟರಿ ಟ್ರಸ್ಟ್, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ರಿ.), ಉಡುಪಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಉಡುಪಿ ಇವರ ಜ೦ಟಿ ಆಶ್ರಯದಲ್ಲಿ ಶ್ರೀಮತಿ ಕೃಷ್ಣವೇಣಿ ಮತ್ತು ಶ್ರೀ ಬಿ. ಗೋವಿ೦ದ ಭಟ್ ಇವರ ಸ್ಮರಣಾರ್ಥ ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಶಸ್ತç ಚಿಕಿತ್ಸಾ ಶಿಬಿರ, ಕನ್ನಡಕ ವಿತರಣಾ ಶಿಬಿರವು ರೋಟರಿ ಶತಾಬ್ಧಿ ಭವನ ಶ೦ಕರಪುರದಲ್ಲಿ ನಡೆಯಿತು. ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕರಾದ ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಈ ಶಿಬಿರವನ್ನು ಕೊಟೇಶ್ವರ ಎನ್.ಆರ್ ಆಚಾರ್ಯ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯರಾದ ಡಾ. ಮಹಿಮಾ ಆಚಾರ್ಯ ಇವರು ಉದ್ಘಾಟಿಸಿದರು. ರೋಟರಿ ಅಧ್ಯಕ್ಷರಾದ ರೋ| ಫ್ಲಾವಿಯಾ ಡಿ’ಸೋಜಾ, ಕಾರ್ಯದರ್ಶಿ ರೋ| ಮಾಲಿನಿ ಶೆಟ್ಟಿ ಮು೦ತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಮಾರು ೧೦೨ ಶಿಬಿರಾರ್ಥಿಗಳು ಭಾಗವಹಿಸಿ ತಪಾಸಣೆಗೊಳಗಾದರು. ೨೧ ಮ೦ದಿ ಉಚಿತ ನೇತ್ರ ಶಸ್ತç ಚಿಕಿತ್ಸೆಗೆ ಆಯ್ಕೆಯಾದರು, 47 ಫಲಾನುಭವಿಗಳು ರಿಯಾಯಿತಿ ದರದ ಕನ್ನಡಕ ವಿತರಣೆಗೆ ಆಯ್ಕೆಯಾದರು.

 
 
 
 
 
 
 
 
 
 
 

Leave a Reply