ಮಂಗಳೂರಿನ ಕರಾವಳಿ ಕುರುಬರ ಸಂಘಕ್ಕೆ  ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ (ರಿ.) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಭೇಟಿ 

ಕರಾವಳಿ ಕುರುಬರ ಸಂಘ (ರಿ.) ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಂಜುನಾಥ ನೋಟಗಾರ್ ಹಾಗೂ ಎಲ್ಲಾ ಪದಾಧಿಕಾರಿಗಳು ಸೇರಿ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ (ರಿ.) ಕರ್ನಾಟಕ ಇದರ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸುರೇಶ್ ಗೋಕಾಕ್ ಹಾಗೂ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಮಹಿಳಾ ಅಧ್ಯಕ್ಷೆ ಸವಿತಾ, ಲಕ್ಷ್ಮಣ ಹಾಗೂ ಸದಸ್ಯರನ್ನು ಸ್ವಾಗತಿಸಿ, ಸನ್ಮಾನಿಸಿ ಕುಶಲೋಪರಿ ವಿಚಾರಿಸಿಕೊಂಡು, ಕರಾವಳಿ ಕುರುಬರ ಸಂಘ ಬೆಳೆದು ಬಂದ ಹಾದಿ ವಿವರಿಸಿದರು.

ಉಡುಪಿ ಜಿಲ್ಲಾಧ್ಯಕ್ಷ ಸ್ವಾಮಿ ಚಿಕ್ಕಮಠ ಮಾತನಾಡಿ ಕರಾವಳಿ ಭಾಗದಲ್ಲಿ ಸಂಘಟನೆಯನ್ನು ಬಲಪಡಿಸಬೇಕು. ಇದಕ್ಕೆಲ್ಲ ನಾವೂ ಜಾತಿ ಧರ್ಮ ಎನ್ನದೆ, ಅನ್ಯತಾ ಭಾವಿಸದೆ ಶ್ರಮ ಪಟ್ಟಲ್ಲಿ ಯಶಸ್ವಿ ಕಾಣಬಹುದು ಎಂದರು.

ಸಂಸ್ಥಾಪಕ ಅಧ್ಯಕ್ಷ ಸುರೇಶ್ ಗೋಕಾಕ್ ಮಾತನಾಡಿ ರಾಜ್ಯ ಸಂಘದ ಸಹಕಾರ ಕರಾವಳಿ ಭಾಗಕ್ಕೆ ಅಗತ್ಯವಾಗಿದೆ ಎಂದರು, ಮತ್ತು ಕರಾವಳಿ ಕುರುಬರ ಸಂಘ ಬೆಳೆದು ಬಂದ ರೀತಿಯನ್ನು ಶ್ಲ್ಯಾಘಿಸಿದರು.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಡುಪಿಯ ಕೃಷ್ಣ ಶೆಟ್ಟಿ ಬೆಟ್ಟು ಮಾತನಾಡಿ ಕರಾವಳಿ ಭಾಗದಲ್ಲಿ ಸೈನಿಕರ ಸಂಖ್ಯೆ ಬೆರಳೆಣಿಕೆಯಷ್ಟೇ ಇದೆ ಅದನ್ನು ಹೆಚ್ಚಿಸುವ ಕಾರ್ಯವನ್ನು ಕರಾವಳಿ ಕುರುಬರ ಸಂಘ ಮತ್ತು ಉಡುಪಿ ಜಿಲ್ಲಾ ರಾಯಣ್ಣ ಅಭಿಮಾನಿ ಬಳಗ ಮಾಡಬೇಕು ಇದಕ್ಕೆ ಅಗತ್ಯವಾದ ಸಲಹೆ ಸೂಚನೆಗಳನ್ನು ತಾವು ನೀಡುವೆನೆಂದರು. ಮಂಜುನಾಥ್ ನೋಟಗಾರ್ ​ಅಧ್ಯಕ್ಷತೆ ವಹಿಸಿದ್ದರು , ಪ್ರ.ಕಾರ್ಯದರ್ಶಿ ನವೀನ್ ಸ್ವಾಗತಿಸಿ ವಂದಿಸಿದರು.

 
 
 
 
 
 
 
 
 
 
 

Leave a Reply