ಸಾಧು ಕೊಠಾರಿ ಪತ್ನಿಗೆ ವಿಮಾ ಮೊತ್ತ ಹಸ್ತಾಂತರ.

ಉಡುಪಿ : ಯಕ್ಷಗಾನ ಕಲಾರಂಗ ​16 ವರ್ಷಗಳ ಹಿಂದೆ​ ಕಲಾವಿದರಿಗಾಗಿ ಆರಂಬಿಸಿದ ‘ಜೀವನ ಆನಂದ’ ವಿಮೆಯ​ ಪಾಲಸಿದಾರರಾದ ಮಂದಾರ್ತಿ ಮೇಳದ ಕಲಾವಿದರಾದ ಸಾಧುಕೊಠಾರಿ ಯವರು ಇತ್ತೀಚೆಗೆ ಮೇಳದ ಚೌಕಿಯಲ್ಲಿ ನಿಧನ​ ಹೊಂದಿದ್ದು, ಅವರ ವಿಮಾ ಮೊತ್ತ ​1 ಲಕ್ಷ ರೂ, ಜತೆಗೆ​ ಬೋನಸ್ ​65 ಸಾವಿರ ರೂಪಾಯಿಯನ್ನು ಯಕ್ಷಗಾನ​ ಕಲಾರಂಗದ ಅಧ್ಯಕ್ಷರಾದ ಎಂ. ಗಂಗಾಧರ ರಾವ್ ಸಾಧು​ ​ಕೊಠಾರಿಯವರ ಪತ್ನಿ ಶಕುಂತಲಾ ಕೊಠಾರಿಗೆ ಹಸ್ತಾಂತರಿಸಿದರು. ​​
 
ವಾರ್ಷಿಕ ಪ್ರೀಮಿಯಮ್‌ನ ಭಾಗಶಃ​ ಹಣವನ್ನು ಸಂಸ್ಥೆ ನೀಡುತ್ತಾ ಬಂದಿದ್ದು, ​53ಕಲಾವಿದರು ಈ​ ಯೋಜನೆಯಲ್ಲಿ ತೊಡಗಿಸಿ​ ​ಕೊಂಡಿದ್ದಾರೆ. ಇದರೊಂದಿಗೆನೆರವಿನ ರೂಪದಲ್ಲಿ ಸಂಸ್ಥೆಯ ವತಿಯಿಂದ ​20ಸಾವಿರ​ ರೂಪಾಯಿಯನ್ನು ಫೆಬ್ರವರಿ ​08.2021೧ರಂದು​ ಕಲಾ​ರಂಗದ ಕಛೇರಿಯಲ್ಲಿ ನೀಡಿ ನೊಂದ ಕುಟುಂಬವನ್ನು​ ​ಸಂತೈಸಿದರು. 
 
 ಈ ಸಂದರ್ಭದಲ್ಲಿ ಕಾರ್ಯದರ್ಶಿ ಮುರಲಿ​ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ., ಜತೆ​ ಕಾರ್ಯದರ್ಶಿ ನಾರಾಯಣ ಎಂ. ಹೆಗಡೆ ಹಾಗೂ ಸಾಧು​ ಕೊಠಾರಿಯವರ ಪುತ್ರಿ ಮಾಧುರಿ ಉಪಸ್ಥಿತರಿದ್ದರು.​​
 
 
 
 
 
 
 
 
 
 
 

Leave a Reply