ಮಣಿಪಾಲದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಪುತ್ರನ್ ಹಿರೇಬೆಟ್ಟು ಆಯ್ಕೆ

ಮಣಿಪಾಲದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ವಿಜಯ ಪುತ್ರನ್ ಹಿರೇಬೆಟ್ಟು ಆಯ್ಕೆ ಯಾಗಿರುತ್ತಾರೆ.

ರಿಕ್ಷಾ ಚಾಲಕರ ಮತ್ತು ಮಾಲಕರ ನೋವು ನಲಿವುಗಳಿಗೆ ಸದಾ ಸ್ಪಂದಿಸುತ್ತಾ ರಿಕ್ಷಾ ಪ್ರಯಾಣಿಕರಿಗೆ ಸುರಕ್ಷಿತ, ಸ್ನೇಹಪೂರ್ಣ ಸೇವೆ ಒದಗಿಸಬೇಕೆನ್ನುವ ಧ್ಯೇಯೋದ್ದೇಶ ಹೊಂದಿಕೊಂಡು ಅದೇ ರೀತಿ ಮುನ್ನಡೆ ಯುತ್ತಿರುವ ಇವರು ಈ ಹಿಂದೆಯೂ ಎರಡು ಬಾರಿ ಮಣಿಪಾಲ ರಿಕ್ಷಾ ಸಂಘದ ಅಧ್ಯಕ್ಷ ರಾಗಿ ಹಾಗು ಸಲಹೆಗಾರರಾಗಿ ಉತ್ತಮ ಸೇವೆ ಸಲ್ಲಿಸಿರುತ್ತಾರೆ.

ಇವರು ತಮ್ಮ ನಿರಂತರ ಸಾಮಾಜಿಕ ಸೇವೆ ಯಿಂದ ಮಣಿಪಾಲ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಜನಾನುರಾಗಿಯಾಗಿರುತ್ತಾರೆ.

 
 
 
 
 
 
 
 
 
 
 

Leave a Reply