ಕಾರ್ಗಿಲ್ ವಿಜಯೋತ್ಸವ‌‌ ದಿನಾಚರಣೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆಹ್ವಾನ

ಕಾರ್ಗಿಲ್ ವಿಜಯೋತ್ಸವ‌‌ ದಿನಾಚರಣೆ ಅಂಗವಾಗಿ ಜುಲೈ 26 ರಿಂದ 30 ರವರೆಗೆ ವೀರ ನಾರಿಯರು ಮತ್ತು ಮಾಜಿ ಸೈನಿಕರ ಪತ್ನಿಯರ ಸಮಾವೇಶ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಆಹ್ವಾನ ನೀಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾ. ಎನ್ ಕೆ.ಶಿವಣ್ಣ, ಬೆಳಗಾವಿ ಜಿಲ್ಲಾಧ್ಯಕ್ಷ ಬಸಪ್ಪ ತಳವಾರ,ವೀರ ನಾರಿಯರ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸ್ವರೂಪ ರಾಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply