ಶ್ರೀ ಪುತ್ತಿಗೆ ಪರ್ಯಾಯಕ್ಕೆ ಹೊರೆಕಾಣಿಕೆಯನ್ನು ನೀಡಲು ಸಮಾಜ ಹಾಗೂ ಸಂಘ ಸಂಸ್ಥೆಗಳಿಗೆ ದಿನಾಂಕ 15.01.2024 ರಂದು ಅವಕಾಶ ನೀಡಲಾಗುತ್ತದೆ. ಅ ದಿನ ಮದ್ಯಾಹ್ನ ಗಂಟೆ 3.30ಕ್ಕೆ ಉಡುಪಿಯ ಜೋಡು ಕಟ್ಟೆಯಿಂದ ಬಿರುದಾವಳಿಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ.
ಮದ್ಯಾಹ್ನ 2.30 ರಿಂದ ಹೊರೆಕಾಣಿಕೆಯಲ್ಲಿ ಪಾಲುಗೊಳ್ಳುವ ಸಮಾಜ ಸಂಘ ಸಂಸ್ಥೆಗಳ ಪ್ರತಿನಿಧಿ ಗಳಿಗೆ ಗೋವಿಂದ ಕಲ್ಯಾಣ ಮಂಟಪದಲ್ಲಿ ಫಲಾಹಾರದ ವ್ಯವಸ್ಥೆ ಮಾಡಲಾಗಿದೆ. ವಾಹನದಲ್ಲಿ ತಮ್ಮ ಸಮಾಜ/ಸಂಘ ಸಂಸ್ಥೆಗಳ ಬ್ಯಾನರ್ ನ್ನು ಹಾಕಬೇಕಾಗಿ ಮನವಿ. ಪ್ರತಿನಿಧಿಗಳೆಲ್ಲರೂ ಬಿರುದಾವಳಿ ಯೊಂದಿಗೆ ಬರಬೇಕಾಗಿ ಮನವಿ.
ಸ್ವಾಗತ ಸಮಿತಿಯು ಹೊರೆಕಾಣಿಕೆಯಲ್ಲಿ ಪಾಲುಗೊಂಡ ಮುಖಂಡರಗಳಿಗೆ ಗೌರವಾರ್ಪಣೆ ಮಾಡಲಿದ್ದಾರೆ. ಹೊರೆಕಾಣಿಕೆ ನೀಡುವ ಪ್ರತಿ ಯೊಂದು ಸದಸ್ಯರುಗಳಿಗೆ ಸ್ವಾಗತ ಸಮಿತಿಯಿಂದ ಪ್ರಸಾದ ಮತ್ತು ಗೌರವ ಪತ್ರ ನೀಡಲಾಗುವುದು. ಹೊರೆ ಕಾಣಿಕೆಯಲ್ಲಿ ಪಾಲುಗೊಂಡ ಸದಸ್ಯರುಗಳ ಹೆಸರು, ಅವರು ನೀಡಿದ ವಸ್ತು/ಕಾಣಿಕೆ ಮತ್ತು ಅದರ ಮೊತ್ತವನ್ನೊಳಗೊಂಡ ಪಟ್ಟಿಯನ್ನು ಹೊರೆ ಕಾಣಿಕೆಯ ಆಫೀಸ್ ನಲ್ಲಿ ನೀಡಿದಲ್ಲಿ ಪ್ರಸಾದ, ಗೌರವ ಪತ್ರಗಳನ್ನು ನೀಡಲಾಗುವುದು. ~ಸ್ವಾಗತ ಸಮಿತಿ, ಪರ್ಯಾಯ ಶ್ರೀಪುತ್ತಿಗೆ ಮಠ, ಉಡುಪಿ