ಆದರ್ಶ್ ಆಸ್ಪತ್ರೆ ಪುತ್ತಿಗೆಶ್ರೀ ಭೇಟಿ

ಉಡುಪಿ : 18 ರಂದು ಉಡುಪಿಯಲ್ಲಿ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಪೂಜ್ಯ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರು ಬುಧವಾರ ಬೆಳಗ್ಗೆ ಉಡುಪಿಯ ಆದರ್ಶ ಆಸ್ಪತ್ರೆಗೆ ಭೇಟಿ ನೀಡಿದರು.

ಸ್ವಾಮೀಜಿಯವರು ಆಗಮಿಸುವಾಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರು ಡಾ। ಜಿ. ಎಸ್ ಚಂದ್ರ ಶೇಖರ್ ಹಾಗು ವಿಮಲಾ ಜಿ. ಎಸ್ ಸ್ವಾಗತಿಸಿ ಬರಮಾಡಿಕೊಂಡರು.

ಬಳಿಕ ಸ್ವಾಮೀಜಿಯವರಿಗೆ ಪಾದಪೂಜೆ ನೆರವೇರಿಸಲಾಯಿತು. ಸ್ವಾಮೀಜಿಗಳು ಆಶೀರ್ವಚನ ನೀಡುತ್ತಾ ಬಂದಂತಹ ಎಲ್ಲರಿಗು ಪರ್ಯಾಯದ ಆಮಂತ್ರಣ ನೀಡಿದರು. ಆಹಾರತಜ್ಞೆ ಅನುಶ್ರೀ ಅವರು ಸ್ವಾಮೀಜಿ ಯವರ ಕಿರು ಪರಿಚಯ ಮಾಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಆದರ್ಶ ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply