ಕೊಡವೂರು ಮಸೀದಿಗೆ ಅಕ್ರಮವಾಗಿ ಜಾಗ ವರ್ಗಾಯಿಸಿದ ವಿವಾದ​ ​ಸರಿಪಡಿ​ಸಿ ಕೊಡುವ ​ ಭರವಸೆ ನೀಡಿದ ಶಾಸಕ  ರಘುಪತಿ ಭಟ್

ಉಡುಪಿ :ಕೊಡವೂರು ಮಸೀದಿಗೆ ಅಕ್ರಮವಾಗಿ ಜಾಗ ವರ್ಗಾಯಿಸಿದ ವಿವಾದ, ಪಂಚಧೂಮಾವತಿ ಸರಕಾರಿ ಭೂಮಿಯನ್ನು ದೈವ​​ಸ್ಥಾನ ಸಹಿತವಾಗಿ ಮಸೀದಿಗೆ ನೀಡಿದ್ದ ಕಂದಾಯ ಇಲಾಖೆ.​ ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಗ್ರಾಮಸ್ಥರು ಮತ್ತು ಹಿಂದೂ ಪರ ಸಂಘಟನೆ ಕಾರ್ಯಕರ್ತರು​. ​
ಸ್ಥಳಕ್ಕೆ ಬಂ​ದ ಶಾಸಕರು, ಗ್ರಾಮಸ್ಥರ ಮನವೊಲಿಸಿ, ಉಡುಪಿ  ಡಿಸಿಯವರು ಇದನ್ನು ಸರಿಪಡಿಸುವಂತೆ ವರದಿ ಮಾಡಿದ್ದಾರೆ​. ಒಂದು ತಿಂಗಳ ಒಳಗೆ ದಾಖಲೆಯನ್ನು ಸರಿಪಡಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ಭರವಸೆ ನೀಡಿದರು.

ಖಾಸಗಿ ಸ್ಥಳದಲ್ಲಿ ಮಸೀದಿಯವರು​ ​ ಅಳವಡಿಸಿದ್ದ ಸಿಸಿಟಿವಿಯನ್ನು ತೆರವುಗೊಳಿಸುವಂತೆ ​ಗ್ರಾ​ಮಸ್ಥರ ಮನವಿಗೆ ಸ್ಪಂದಿಸಿದ ಪೊಲೀಸರು  ಸಿಸಿಟಿವಿಯನ್ನು ತೆರವುಗೊಳಿಸಿದರು.​  ​ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಧಿಕ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆಯಾಗಿತ್ತು.  

​ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ಸಂವೇದನಾ ಪೌಂಡೆಷನ್  ನ ಪ್ರಕಾಶ್ ಮಲ್ಪೆ, ಪಂಚ ಧೂಮಾವತಿ ದೈವಸ್ಥಾನದ ಅಧ್ಯಕ್ಷ ಶುಭಾಶ್  ಮೆಂಡನ್, ಹಾಗು  ದೈವಸ್ಥಾನ ಸಮಿತಿಯ ಸದಸ್ಯರು, ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ  ನೆರೆದಿದ್ದರು.  ​​

 
 
 
 
 
 
 
 
 
 
 

Leave a Reply