ರೋಟರಿಜಿಲ್ಲೆ ೩೧೮೨ ಇದರ ಜಿಲ್ಲಾ ಸಮ್ಮೇಳನ ‘ರಾಜಪರ್ವ’ ಶನಿವಾರದಂದು ಉಡುಪಿಯ ಅಮೃತ್ಗಾರ್ಡನ್ನಲ್ಲಿ ಶ್ರೀ ಅದೃಶ್ಯ ಕಾಡ ಸಿದ್ದೇಶ್ವರ ಸ್ವಾಮೀಜಿ, ಸಿದ್ದಗಿರಿ, ಕನ್ನೇರಿ ಮಠ, ಕೊಲ್ಲಾಪುರ ಇವರು ಉದ್ಘಾಟಿಸಿದರು. ಸೃಷ್ಠಿಯಲ್ಲಿರುವ ವಿಷಮತೆಯನ್ನು ದೂರಗೊಳಿಸಿ ಸಮತೆಯನ್ನು ಸಾಧಿಸಲು, ಸಶಕ್ತರು ಅಶಕ್ತರನ್ನು ಮೇಲೆತ್ತಲು ಭಗವಂತ ಮನುಷ್ಯನನ್ನು ಸೃಷ್ಠಿಸಿದ.
ಜಗತ್ತಿಗೆ ಮಾದರಿಯಾದ ರಾಜಕೀಯ ವ್ಯವಸ್ಥೆ ನಮ್ಮದೇಶದಲ್ಲಿತ್ತು. ರಾಜನಲ್ಲಿ ಸಂಗ್ರಹಿತವಾದ ತೆರಿಗೆ ಆಡಳಿತ ವಿನಿಯೋಗದ ನಂತರ ಮತ್ತೆ ಸಮಾಜ ಮುಖಿಯಾಗಿ ಹರಿಯಬೇಕು ಎನ್ನುವ ದೃಷ್ಠಿಯಲ್ಲಿ ಲೋಕಕಲ್ಯಾಣಾರ್ಥ ಹೋಮ ಹವನಗಳು ಜರಗುತ್ತಿದ್ದವು. ಈ ಜಗತ್ತು ಕೊಟ್ಟವನನ್ನು ಎಂದಿಗೂ ಸ್ಮರಿಸುತ್ತದೆ ಹೊರತು ತನ್ನ ಸ್ವಂತಕ್ಕಾಗಿ ಕೂಡಿಡುವ ಶ್ರೀಮಂತನನ್ನು ಅಲ್ಲ.
ರೋಟರಿ ಬಂಧುಗಳು ವಿಶ್ವದ ಸೇವೆಯ ಕೈಂಕರ್ಯವನ್ನು ನಡೆಸುತ್ತಿರುವುದು, ತಮ್ಮ ಸ್ವಂತ ದುಡಿಮೆಯ ಒಂದು ಬಾಗವನ್ನು ಸೇವೆಯ ರೂಪದಲ್ಲಿ ವಿನಿಯೋಗಿ ಸುತ್ತಿರುವುದು ನಿಜವಾಗಿಯೂ ಅಭಿನಂದನೀಯ, ಇಂತಹ ಸಮ್ಮೇಳದ ಮೂಲಕ ಇನ್ನಷ್ಟು ಚಿಂತನ~ಮಂಥನಗಳು ನಡೆಯಲಿ ಎಂದು ಆಶೀರ್ವಚಿಸಿದರು.
ರೊಟರಿ ಜಿಲ್ಲಾ ಗವರ್ನರ್ ಬಿರಾಜಾರಾಮ್ ಭಟ್ ಮಾತನಾಡಿ ಸ್ನೇಹ ಒಡನಾಟದೊಂದಿಗೆ ಪ್ರಾರಂಭವಾದ ರೋಟರಿ ಇಂದು ಸೇವೆಯ ಮೂಲಕ ಜಗತ್ತನ್ನು ಆವರಿಸಿದೆ. ‘ರಾಜಪರ್ವ’ ಸಂಘಟಿಸುವಲ್ಲಿ ಕಾರಣೀಕರ್ತರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಅಂತಾರಾಷ್ಟ್ರೀಯ ರೋಟರಿ ಅಧ್ಯಕ್ಷರ ಪ್ರತಿನಿಧಿ ಟಿಎನ್ ಸುಬ್ರಹ್ಮಣಿಯವರು ಸಮುದಾಯಕ್ಕಾಗಿ ಸೇವೆ ಸಲ್ಲಿಸುತ್ತಿರುವ ರೋಟರಿಯ ಮಹತ್ವದ ಬಗ್ಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ಉಡುಪಿ ನಗರಸಭಾಧ್ಯಕ್ಷೆ ಶ್ರೀಮತಿ ಸುಮಿತ್ರ ನಾಯಕ್ ಭಾಗವಹಿಸಿದ್ದರು. ಕರ್ನಾಟಕ ರಾಜ್ಯ ಹಿಂದುಳಿದ ಆಯೋಗದ ಅಧ್ಯಕ್ಷ ಕೆ ಜಯಪ್ರಕಾಶ್ ಹೆಗ್ಡೆ “ರಾಜಕೀಯ ಮತ್ತು ಸೇವೆ”ಯ ಬಗ್ಗೆ ತಿಳಿಸಿದರು. ಡಾ| ವೀಣಾ ಬನ್ನಂಜೆಯವರು “ಸೇವೆ ಮತ್ತು ಸಂಕಲ್ಪ” ವಿಷಯದ ಬಗ್ಗೆ ಮಾತನಾಡಿದರು. ವೇದಿಯಲ್ಲಿ ರೋಟರಿ ಜಿಲ್ಲಾ ಪ್ರಥಮಮಹಿಳೆ ವರದಾಂಬ ಆರ್ ಭಟ್, ಮಾಜಿ ರೋಟರಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ, ಭರತೇಶ್ ಅಧಿರಾಜ್, ಜ್ಞಾನ ವಸಂತ ಶೆಟ್ಟಿ,
ನಿಯೋಜಿತ ಜಿಲ್ಲಾ ಗವರ್ನರ್ ಎಂ.ಜಿ.ರಾಮಚಂದ್ರ ಮೂರ್ತಿ, ಸಮ್ಮೇಳನ ಕಾರ್ಯದರ್ಶಿ ಬಿ.ವಿ. ಲಕ್ಷ್ಮೀ ನಾರಾಯಣ್, ಹಾಗೂ ಕೃಷ್ಣ ಕಾಂಚನ್, ಡಾ| ಕೆ. ಸುರೇಶ್ ಶೆಣೈ, ಅತಿಥ್ಯವನ್ನು ವಹಿಸಿರುವ ರೋಟರಿ ಕಲ್ಯಾಣಪುರ ಅಧ್ಯಕ್ಷ ಡೆಸ್ಮಂಡ್ ಎಚ್ ವಾಚ್, ಕಾಯದರ್ಶಿ ವಿಲಿಯಂ ಅಂದ್ರಾದೆ.