ಗೀತೆ ಮತೀಯವಲ್ಲ, ಸನ್ಮತಿಯ ಗ್ರಂಥ: ಪುತ್ತಿಗೆ ಶ್ರೀ

ಭಗವದ್ಗೀತೆ ಮತೀಯ ಗ್ರಂಥವಲ್ಲ, ಸನ್ಮತಿಯ ಗ್ರಂಥ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ವೈಯಕ್ತಿಿಕ, ಕೌಟುಂಬಿಕ, ವ್ಯವಹಾರಿಕ ಹೀಗೆ ಎಲ್ಲ ರೀತಿಯ ಸಮಸ್ಯೆೆಗಳಿಗೂ ಗೀತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಗೀತೆಯನ್ನು ನಿತ್ಯವೂ ಪಠಿಸುವುದರಿಂದ ಮನಸ್ಸಿಿಗೆ ಏಕಾಗ್ರತೆ ಹಾಗೂ ಶಾಂತಿ ಲಭಿಸಲಿದೆ ಎಂದು ಭಾವೀ ಪರ್ಯಾಯ ಶ್ರೀ ಪುತ್ತಿಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ನುಡಿದರು.

ಮಣಿಪಾಲದ ಗ್ರಾಾಮ ಸೇವಾ ಪ್ರತಿಷ್ಠಾಾನದಿಂದ ಹೊರತಂದಿರುವ ‘ಶ್ರೀ ಮದ್ಭಗವದ್ಗೀತಾ’ ಪುಸ್ತಕವನ್ನು ಮಣಿಪಾಲದ ಗೀತಾಮಂದಿರದಲ್ಲಿ ಗುರುವಾರ ಬಿಡುಗಡೆಗೊಳಿಸಿ ಅವರು ಆಶೀರ್ವಚನ ನೀಡಿದರು.

ಮಣಿಪಾಲದ ಯಶಸ್ಸಿಿನ ಮೂಲ ಗೀತಾಮಂದಿರವಾಗಿದೆ. ಇಲ್ಲಿನ ಮಹಾನ್ ಸಾಧಕರ ಹಿಂದೆ ಭಗವದ್ಗೀತೆಯ ಸ್ಫೂರ್ತಿ ಇದೆ. ಉಡುಪಿಯ ಗೀತಾಮಂದಿರಕ್ಕೂ ಇದುವೇ ಪ್ರೇರಣೆಯಾಗಿದೆ. ಜೀವನದಲ್ಲಿ ಸಾಧನೆ ಮಾಡಲು ಭಗವದ್ಗೀತೆಯ ಸಂದೇಶಗಳಿಂದ ಸಾಧ್ಯವಿದೆ. ಇದನ್ನು ಪಾಲಿಸಿದರೆ ಮಹಾತ್ಮರಾಗಬಹುದು. ಮನೋವೈದ್ಯರು, ಎಂಎನ್‌ಸಿ ಕಂಪೆನಿ ಸಿಇಒಗಳು ಗೀತೆಯ ಸಾರವನ್ನು ಪಾಲಿಸುತ್ತಾಾರೆ. ಏಕಾಗ್ರತೆ, ಸಮರ್ಪಣಾಭಾವದಿಂದ ಕೆಲಸಕ್ಕೆೆ ತಕ್ಕ ಪ್ರತಿಫಲ ಕಂಡುಕೊಳ್ಳಲು ಸಾಧ್ಯವಿದೆ. ಭಗವದ್ಗೀತೆಯನ್ನು ಆಧ್ಮಾಾತ್ಮಿಿಕ ರೂಪದಲ್ಲಿ ಸಮರ್ಥನಿಯವಾಗಿ ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿದೆ. ಗೀತೆಯ ಸಂದೇಶವನ್ನು ಪರಿಪಾಲನೆ ಮಾಡುವ ಜತೆಗೆ ನಮ್ಮಲ್ಲಿರುವ ಅಹಂಕಾರವನ್ನು ಕಡಿಮೆ ಮಾಡಿದರೆ ಮನಃಶಾಂತಿ ಸಿಗಲಿದೆ. ಇದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಿಗೆ ನೆಮ್ಮದಿ ಸಿಗಲಿದೆ ಎಂದರು.

ಜಗತ್ತನ್ನು ಶ್ರೀಕೃಷ್ಣ ಮುನ್ನಡೆಸುತ್ತಿಿದ್ದಾಾನೆ. ಎಲ್ಲವೂ ನಾನೇ ಎಂಬ ಭಾವನೆಯನ್ನು ತ್ಯಜಿಸಿ ಎಲ್ಲವೂ ದೇವರದ್ದು ಎಂಬ ಭಾವನೆ ಹೊಂದಬೇಕು. ಅನವಶ್ಯಕವಾಗಿ ಯಾವುದೇ ವಿಚಾರಕ್ಕೂ ಒತ್ತಡಕ್ಕೆೆ ಒಳಗಾಗಬಾರದು. ಆಗುವುದೆಲ್ಲವನ್ನೂ ಸಂತೋಷದಿಂದ ಸ್ವೀಕರಿಸಬೇಕು. ದೇವರ ಇಚ್ಛೆೆಗೆ ವಿರುದ್ಧವಾಗಿ ಏನನ್ನೂ ಮಾಡಬಾರದು. ಇದು ಅಶಾಂತಿಗೂ ಕಾರಣವಾಗಬಹುದು ಎಂದರು.

ತಮ್ಮ ಪರ್ಯಾಯ ಅವಧಿಯಲ್ಲಿ ಭಗವದ್ಗೀತೆಯನ್ನು ಎಲ್ಲ ಭಾಷೆಯಲ್ಲಿ ಅನುವಾದಿಸುವ, ಕೋಟಿ ಜನರಿಂದ ಗೀತೆಯನ್ನು ಬರೆಸುವ, ಉಡುಪಿ ಕಲ್ಸಂಕದಲ್ಲಿ ಮಹಾದ್ವಾಾರ ನಿರ್ಮಿಸುವ, ಗೀತೆಯ ಕುರಿತು ಅಂತಾರಾಷ್ಟ್ರೀಯ ಸ್ತರದ ಸಮ್ಮೇಳನವನ್ನು ಆಯೋಜಿಸುವ ಗುರಿಯನ್ನು ಇರಿಸಿಕೊಳ್ಳಲಾಗಿದೆ ಎಂದು ಪುತ್ತಿಿಗೆ ಶ್ರೀಪಾದರು ತಿಳಿಸಿದರು. 

ತರಂಗ ವಾರಪತ್ರಿಿಕೆಯ ವ್ಯವಸ್ಥಾಾಪಕ ಸಂಪಾದಕರಾದ ಡಾ ಸಂಧ್ಯಾಾ ಎಸ್.ಪೈ ಅವರು ಪ್ರಸ್ತಾಾವನೆಗೈದು, ಬೋಳು ಗುಡ್ಡದಂತಿದ್ದ ಮಣಿಪಾಲವಿಂದು ವಿಶ್ವವಿಖ್ಯಾಾತಿಯಾಗಿದ್ದರೆ ಅದಕ್ಕೆೆ ಯುಗಪುರುಷ ಉಪೇಂದ್ರ ಪೈ ಅವರ ಕಾರ್ಯಸಾಧನೆ ಕಾರಣವಾಗಿದೆ. ಅವರು ಭಗವದ್ಗೀತೆಯನ್ನು ಓದುವ ಜತೆಗೆ ಮನನ ಮಾಡುತ್ತಿಿದ್ದರು ಮತ್ತು ಅದನ್ನು ಹೃದಯದಲ್ಲಿಟ್ಟುಕೊಂಡಿದ್ದರು. ದೈವಸಂಕಲ್ಪವೂ ಅವರಿಗಿತ್ತು. ಜಾಗತಿಕವಾಗಿ ಭಗವದ್ಗೀತೆಯನ್ನು ಪ್ರಚಾರ ಮಾಡಲು ಜೀವನವನ್ನು ಮುಡಿಪಾಗಿಟ್ಟುಕೊಂಡಿರುವ ಪುತ್ತಿಿಗೆ ಶ್ರೀಪಾದರು ನಮ್ಮ ನಡುವಿನ ಯುಗಪುರುಷರು ಎಂದು ಹೇಳಿದರು.

ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ.ಸತೀಶ್ ಯು.ಪೈ, ಡಾ ಟಿಎಂಎ ಪೈ ಪ್ರತಿಷ್ಠಾಾನದ ಅಧ್ಯಕ್ಷ ಟಿ. ಅಶೋಕ್ ಪೈ, ಗಾಯತ್ರಿಿ ಪೈ, ಮಣಿಪಾಲ ಟೆಕ್ನಾಾಲಜಿಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಗೌತಮ್ ಪೈ, ವನಿತಾ ಪೈ, ಮಣಿಪಾಲ ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಒ ವಿನೋದ್ ಕುಮಾರ್, ಮಣಿಪಾಲ ಟೆಕ್ನಾಾಲಜಿಸ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಹಾಗೂ ಸಿಇಓ ಅಭಯ್ ಗುಪ್ತೆೆ, ಮಣಿಪಾಲ ಸಮೂಹದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಪ್ರಮೋದ್ ಫೆರ್ನಾಂಡಿಸ್, ಗೀತಾ ಮಂದಿರದ ಅರ್ಚಕ ವೇ ಮೂ ಶಿವಾನಂದ ಭಟ್ ಉಪಸ್ಥಿಿತರಿದ್ದರು. ಉದಯವಾಣಿ ಹಿರಿಯ ಸಹಾಯಕ ಸಂಪಾದಕ ಕುಮಾರಸ್ವಾಾಮಿ ಸ್ವಾಾಗತಿಸಿದರು. ತರಂಗ ವಾರಪತ್ರಿಿಕೆಯ ಸಂಪಾದಕಿ ಡಾ ಯು.ಬಿ.ರಾಜಲಕ್ಷ್ಮೀ ವಂದಿಸಿದರು. ಮಾನವ ಸಂಪನ್ಮೂಲ ವಿಭಾಗದ ಹಿರಿಯ ಮ್ಯಾಾನೇಜರ್ ಉಷಾರಾಣಿ ಕಾಮತ್ ನಿರೂಪಿಸಿದರು.

 
 
 
 
 
 
 
 
 
 
 

Leave a Reply