ಪಂಡಿತ್ ದೀನದಯಾಲ್ ಉಪಾಧ್ಯಾಯರ ಜನ್ಮದಿನ ಪ್ರಯುಕ್ತ ಪ್ರತಿ ಬೂತ್ ಮಟ್ಟದಲ್ಲಿ ಗಿಡ ನೆಡುವ ಕಾರ್ಯಕ್ರಮ

ಉಡುಪಿ : ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಯವರ 71 ನೇ ಜನ್ಮದಿನದ ಅಂಗವಾಗಿ ಸೇವೆ ಮತ್ತು ಸಮರ್ಪಣೆ ಅಭಿಯಾನದ ಪ್ರಯುಕ್ತ ಸೆ.25ರಂದು, ಪಂಡಿತ್ ದೀನದಯಾಲ್ ಉಪಾಧ್ಯಾಯರ ಜನ್ಮದಿನ ಪ್ರಯುಕ್ತ ಪ್ರತಿ ಬೂತ್ ಮಟ್ಟದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಹಾಗು ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

ಈ ಪ್ರಯುಕ್ತ ಬಿ ಜೆ ಪಿ ಗ್ರಾಮಾಂತರ ವತಿಯಿಂದ 78 ಬೂತ್ ಗೆ ದೀನದಯಾಲ್ ಅವರ ಭಾವಚಿತ್ರ  ನೀಡುವ  ಕಾರ್ಯಕ್ರಮಕ್ಕೆ  ಚೇರ್ಕಾಡಿ ಮಹಾಶಕ್ತಿ ಕೇಂದ್ರದ ಚೇರ್ಕಾಡಿ ಶಕ್ತಿಕೇಂದ್ರದಲ್ಲಿ ಮಂಡಲದ ಅಧ್ಯಕ್ಷೆ ವೀಣಾ ವಿ. ನಾಯ್ಕ್, ಮಂಡಲದ ಪ್ರಭಾರಿ ಶ್ರೀಶ ನಾಯಕ್ ಹಾಗೂ  ಜಿಲ್ಲಾ ಸಂಚಾಲಕ ಕಿಶೋರ್ ಕುಮಾರ್, ಗ್ರಾಮಾಂತರ ಸಂಚಾಲಕ ಉಮೇಶ ನಾಯ್ಕ್ ಚೇರ್ಕಾಡಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮನೋಜ್ ಶೆಟ್ಟಿ ಇವರೆಲ್ಲರೂ ಸೇರಿ ಚಾಲನೆ ನೀಡಿದರು.

ಪ್ರತಿ ಬೂತ್ ಮಟ್ಟದಲ್ಲಿ ಪಂಡಿತ್ ದೀನದಯಾಲ್ ಉಪಾಧ್ಯಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ  ಮಾಡಬೇಕೆಂಬ ಆಶಯದಲ್ಲಿ  ಚೇರ್ಕಾಡಿ, ಕರ್ಜೆ, 38 ನೇ ಕಳ್ತೂರು, ಕೆಂಜೂರೂ, ಕೊಕ್ಕರ್ಣೆ, ನಾಲ್ಕೂರು ಶಕ್ತಿ ಕೇಂದ್ರದ ಒಟ್ಟು 29 ಬೂತ್ ಗೆ ಇಂದು ಭಾವಚಿತ್ರ, ದೀನದಯಾಲ್ ರ ಪರಿಚಯ ಪತ್ರ, ಪ್ರತಿಜ್ಞಾ ಪತ್ರ, ಹಾಗೂ ಪೋಸ್ಟ್ ಕಾರ್ಡ್ ಗಳನ್ನು ನೀಡಲಾಯಿತು.

ಉಡುಪಿ ಗ್ರಾಮಾಂತರ ಉಪಾಧ್ಯಕ್ಷ ರಘುಪತಿ ಬ್ರಹ್ಮಾವರ, ಸಹಾ ಸಂಚಾಲಕ ನಿತ್ಯಾನಂದ ಬಿ. ಆರ್, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಕುಲಾಲ್, ಸಚಿನ್ ಪೂಜಾರಿ, ಶಕ್ತಿಕೇಂದ್ರದ ಸಂಚಾಲಕರು, ಸಹ ಸಂಚಾಲಕರು, ಬೂತ್ ಅಧ್ಯಕ್ಷರು, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು  ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply