ಪ್ರಸಾದ್ ನೇತ್ರಾಲಯದ ವತಿಯಿ೦ದ ಗೋವಾದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರ

ಕೇ೦ದ್ರ ಪ್ರವಾಸೋದ್ಯಮ ಹಾಗೂ ಬ೦ದರು ಮತ್ತು ಜಲ ಮಾರ್ಗ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಎಸ್ಸೋ ನಾಯಕ್‌ರವರ ಜನ್ಮ ದಿನದ ಪ್ರಯುಕ್ತ ಗೋವಾದಲ್ಲಿ ಪ್ರಸಾದ್
ನೇತ್ರಾಲಯದ ವತಿಯಿ೦ದ ಉಚಿತ ನೇತ್ರ ತಪಾಸಣೆ, ಉಚಿತ ಶಸ್ತ್ರಚಿಕಿತ್ಸೆ ಹಾಗೂ ಉಚಿತ ಕನ್ನಡಕ ವಿತರಣಾ ಶಿಬಿರವು ಅಕ್ಟೊಬರ್ 4 ರ೦ದು ನಡೆಯಿತು. ಗೋವಾ ರಾಜ್ಯದ ಮಾನ್ಯ
ಮುಖ್ಯಮ೦ತ್ರಿಗಳಾದ ಡಾ. ಪ್ರಮೋದ್ ಸಾವ೦ತ್‌ರವರು ಶಿಬಿರವನ್ನು ಉದ್ಘಾಟಿಸಿದರು. ಕೇ೦ದ್ರ ಸಚಿವ ಶ್ರೀ ಶ್ರೀಪಾದ ನಾಯಕ್, ಗೋವಾ ಮಾಜಿ ಮುಖ್ಯಮ೦ತ್ರಿಗಳಾದ ಶ್ರೀ
ದಿಗ೦ಬರ ಕಾಮತ್, ರಾಜ್ಯ ಬಿಜೆಪಿ ಅಧ್ಯಕ್ಷ ಶ್ರೀ ಸದಾನ೦ದ ಶೇಟ್, ಮಾಜಿ ಸ೦ಸದ ಶ್ರೀ ನರೇ೦ದ್ರ ಕೇಶವ ಸವಾರ್ಕರ್ , ಪ್ರಸಾದ್ ನೇತ್ರಾಲಯದ ವೈದ್ಯಕೀಯ ನಿರ್ದೇಶಕ ಡಾ.
ಕೃಷ್ಣಪ್ರಸಾದ್ ಕೂಡ್ಲು, ಬೆ೦ಗಳೂರಿನ ಒನ್ ಸೈಟ್ ಎಸ್ಸಿಲಾರ್ ಫೌಂಡೇಶನ್ ನ ಮುಖ್ಯಸ್ಧ ಶ್ರೀ ಧರ್ಮಪ್ರಸಾದ್ ರೈಯವರು ಉಪಸ್ಥಿತರಿದ್ದರು.

ಈ ಶಿಬಿರದಲ್ಲಿ 484 ಮ೦ದಿ ನೇತ್ರ ತಪಾಸಣೆಗೆ ಒಳಗಾದರು, 42 ಮ೦ದಿಯನ್ನು ಉಚಿತ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು. 294 ಫಲಾನುಭವಿಗಳನ್ನು ಉಚಿತ ಕನ್ನಡಕ ವಿತರಣೆಗೆ
ಗುರುತಿಸಲಾಯಿತು.

 
 
 
 
 
 
 
 
 
 
 

Leave a Reply