ಹೊನ್ನಾಳದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕರ್ನಾಟಕ ಮುಸ್ಲಿ೦ ಜಮಾಅತ್, ಹಾರಾಡಿ ಗ್ರಾಮ ಸಮಿತಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್(ರಿ.), ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟು೦ಬ ಕಲ್ಯಾಣ ಇಲಾಖೆ, ಉಡುಪಿ , ರೋಟರಿ ರೋಯಲ್ ಬ್ರಹ್ಮಾವರ ಇವರ ಜ೦ಟಿ ಸಹಕಾರದಲ್ಲಿ ಹೊನ್ನಾಳ ಶಾದಿ ಮಹಲ್‌ನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಜರಗಿತು. 
ಕಾರ್ಯಕ್ರಮಕ್ಕೆ ಹೊನ್ನಾಳ ಮಸೀದಿ ಪೇಶಿ ಇಮಾಮ್ ಮೌಲಾನ ಫಕ್ರುದ್ದೀನ್ ರಜ್ವಿ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರಾಡಿ ಗ್ರಾಮ ಜಮಾಆತ್ ಸಮಿತಿಯ ಅಧ್ಯಕ್ಷ ಇಮ್ರಾನ್ ಹೆನ್ನಾಬೈಲ್‌ರವರು ವಹಿಸಿದ್ದರು.
ಪ್ರಸಾದ್ ನೇತ್ರಾಲಯದ ನೇತ್ರ ತಜ್ಞೆ ಡಾ. ನವೋಮಿ ಡಿ’ಕೋಸ್ಟ, ರೊಟೇರಿಯನ್ ಶ್ರೀ ರಾಜಾರಾಮ ಶೆಟ್ಟಿ, ಶ್ರೀ ನಾಗರಾಜ ಶೆಟ್ಟಿ ಹೊನ್ನಾಳ, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸ೦ಪರ್ಕಾಧಿಕಾರಿ ಶ್ರೀ ಮೊಹನ್‌ದಾಸ್ ವೇದಿಕೆಯಲ್ಲಿ ಉಪಸ್ಠಿತರಿದ್ದು ಸಾ೦ಧರ್ಭಿಕವಾಗಿ ಮಾತನಾಡಿದರು.
ಸುಮಾರು 177ಜನರ ನೇತ್ರ ತಪಾಸಣೆ ನಡೆಸಿ, 22 ಜನರನ್ನು ಕಣ್ಣಿನ ಪೊರೆ ಚಿಕಿತ್ಸೆಗಾಗಿ ಆಯ್ಕೆ ಮಾಡಲಾಯಿತು. 
 
 
 
 
 
 
 
 
 
 
 

Leave a Reply