ನೀರಿನ ಸಂರಕ್ಷಣೆ ಪ್ರತಿಯೊಬ್ಬನ ಆದ್ಯ ಕರ್ತವ್ಯ ~ ಶ್ರೀ ರಾಜೇಂದ್ರ

ಪೃಕೃತಿ ನಮ್ಮ ಅವಶ್ಯಕತೆಗಳನ್ನು ಪೊರೈಸಬಹುದು ಹೊರತು ಸ್ವಾರ್ಥವಲ್ಲ. ನೀರನ್ನು ಮಿತವಾಗಿ ಬಳಸಿ, ಸಂರಕ್ಷಿಸಿ ಜೀವಸೆಲೆಯನ್ನು ಉಳಿಸುವ ಧ್ಯೇಯ ನಮ್ಮೆಲ್ಲರದಾಗಬೇಕು ಎಂದು ದಕ್ಷಿಣ ಕನ್ನಡ ನಿರ್ಮಿತಿ ಕೇಂದ್ರದ ಕಾರ್ಯ ನಿರ್ವಹಣಾ ನಿರ್ದೇಶಕ ಶ್ರೀ ರಾಜೇಂದ್ರ ಕಲ್ಬಾಯಿ ಅವರು ಪೂರ್ಣ ಪ್ರಜ್ಞ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಉಡುಪಿಯಲ್ಲಿ ನಡೆದ ವಿಶ್ವ ಜಲ ದಿನಾಚರಣೆಯ ಕಾರ‍್ಯಕ್ರಮದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಕೃಷ್ಣ ಕೊತಾಯ, ಪುರಾತನ ಕಾಲದಿಂದಲೂ ಸನಾತನ ಪರಂಪರೆಯಡಿ ವಿಶೇಷ ಸ್ಥಾನ ಪಡೆದ ನೀರಿನ ಸಂರಕ್ಷಣೆಯ ಪ್ರಾಧಾನ್ಯತೆಯ ಕುರಿತು ವಿವರಿಸಿದರು.
ಸಂಸ್ಥೆಯ ನರ‍್ದೇಶಕರಾದ ಡಾ. ಭರತ್ ವಿ ಅಧ್ಯಕ್ಷತೆ ವಹಿಸಿದ್ದರು.

ಇಕೊ ಕ್ಲಬ್ ಘಟಕದ ಸಂಚಾಲಕ ಪ್ರೊ. ಸಂತೋಷ್ ಎನ್ ಪ್ರಭು ಅವರು ಕಾರ್ಯಕ್ರಮ ಸಂಯೋಜಿಸಿದ್ದರು ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಸಮೀಕ್ಷ ಪ್ರಭು ನಿರೂಪಿಸಿ, ನವೀನ್ ಭಟ್ ವಂದಿಸಿದರು

 
 
 
 
 
 
 
 
 
 
 

Leave a Reply